ಸಿಖ್ಖರ ಪವಿತ್ರ ಗ್ರಂಥಕ್ಕೆ ಹಾನಿಯೆಸಗಿದ್ದಕ್ಕಾಗಿ ಹತ್ಯೆಗೀಡಾದ ಲಖ್‍ಬೀರ್ ವಿರುದ್ಧ ಎಫ್‍ಐಆರ್ ದಾಖಲು !

Update: 2021-10-21 12:04 GMT
Photo: Twitter

ಚಂಡೀಗಢ: ಇತ್ತೀಚೆಗೆ ಸಿಂಘು ಗಡಿ ಸಮೀಪ ರೈತರ ಪ್ರತಿಭಟನೆ ಸ್ಥಳದಲ್ಲಿ ಹತ್ಯೆಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಲಖ್‍ಬೀರ್ ಸಿಂಗ್ ಎಂಬಾತನ ವಿರುದ್ಧ  ಸಿಖ್ಖರ ಪವಿತ್ರ ಗ್ರಂಥಕ್ಕೆ ಹಾನಿಯೆಸಗಿದ್ದಕ್ಕಾಗಿ ಹರ್ಯಾಣ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

ಕುಂಡ್ಲಿ ಪೊಲೀಸ್ ಠಾಣೆಯಲ್ಲಿ ಅಕ್ಟೋಬರ್ 17ರಂದು ಬಲ್ವೀಂದರ್ ಸಿಂಗ್ ಎಂಬಾತನ ದೂರಿನ ಆಧಾರದಲ್ಲಿ ದಾಖಲಿಸಲಾಗಿದೆ. ಸಿಂಗ್ ವಿರುದ್ಧ ಐಪಿಸಿ ಸೆಕ್ಷನ್ 295-ಎ ಅನ್ವಯ ಪ್ರಕರಣ ದಾಖಲಾಗಿದೆ.

ದೂರುದಾರ ಬಲ್ವಿಂದರ್ ಸಿಂಗ್ ಗುಂಪಿಗೆ ಸೇರಿದ ಭಗವಂತ್ ಸಿಂಗ್ ಹಾಗೂ ಗೋವಿಂದ್ ಪ್ರೀತ್ ಎಂಬ ಇಬ್ಬರು ನಿಹಾಂಗ್ ಸಿಖ್ ವ್ಯಕ್ತಿಗಳು ಲಖ್‍ಬೀರ್ ಸಿಂಗ್ ಹತ್ಯೆಗೆ ಹೊಣೆ ಹೊತ್ತು ಪೊಲೀಸರಿಗೆ ಶರಣಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News