ಮಮತಾ ಬ್ಯಾನರ್ಜಿ ಮುಖ್ಯ ಸಲಹೆಗಾರನಿಗೆ ಜೀವಬೆದರಿಕೆ

Update: 2021-10-27 08:06 GMT
photo: indian express

ಕೋಲ್ಕತಾ:ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮುಖ್ಯ ಸಲಹೆಗಾರರಾಗಿರುವ ಆಲಪನ್ ಬಂಡೋಪಾಧ್ಯಾಯ ಅವರು ಜೀವ ಬೆದರಿಕೆ ಸ್ವೀಕರಿಸಿದ್ದಾರೆ. ಜೀವಬೆದರಿಕೆಯ ಪತ್ರವನ್ನು ಆಲಪನ್ ಅವರ ಪತ್ನಿಗೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ.

ಇಂಗ್ಲಿಷ್‌ನಲ್ಲಿ ಬರೆದ ಒಂದು ಸಾಲಿನ ಪತ್ರವನ್ನು ಕಲ್ಕತ್ತಾ ವಿಶ್ವವಿದ್ಯಾಲಯದ ಉಪಕುಲಪತಿಯಾಗಿರುವ ಸೋನಾಲಿ ಚಕ್ರವರ್ತಿ ಬ್ಯಾನರ್ಜಿ ಅವರಿಗೆ ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಲಾಗಿದೆ.

 “ನಿಮ್ಮ ಪತಿ ಕೊಲ್ಲಲ್ಪಡುತ್ತಾರೆ. ನಿನ್ನ ಪತಿಯನ್ನು ಯಾರೂ ಉಳಿಸಲಾರರು’’ ಎಂದು  ಗೌರಹರಿ ಮಿಶ್ರಾ ಸಹಿ ಮಾಡಿದ ಪತ್ರದಲ್ಲಿ ಹೀಗೆ ಬರೆಯಲಾಗಿದೆ

ಪತ್ರದ ಪ್ರತಿಯನ್ನು ರಾಜಾಬಝಾರ್ ವಿಜ್ಞಾನ ಕಾಲೇಜಿನ ವಿಜ್ಞಾನ ಕಾರ್ಯದರ್ಶಿಗೂ ಕಳುಹಿಸಲಾಗಿದೆ. ಪತ್ರದ ಲಕೋಟೆಯ ಮೇಲೆ ಕಳುಹಿಸುವವರ ಹೆಸರು ಮತ್ತು ವಿಳಾಸವನ್ನು ಸಹ ಬರೆಯಲಾಗಿದೆ.

ಕೊಲೆ ಬೆದರಿಕೆಯ ಕುರಿತು ಪ್ರತಿಕ್ರಿಯಿಸಲು ಆಲಾಪನ್ ನಿರಾಕರಿಸಿದ್ದಾರೆ. ಕೋಲ್ಕತ್ತಾ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆಲಾಪನ್ ಈ ಹಿಂದೆ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಕೇಂದ್ರವು ಅವರನ್ನು ವಾಪಸ್ ಕರೆಸಿಕೊಂಡ ನಂತರ ಸೇವೆಯಿಂದ ನಿವೃತ್ತರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News