ಅಹಂಕಾರವನ್ನು ರೈತರು ಸತ್ಯಾಗ್ರಹದಿಂದ ಸೋಲಿಸಿದ್ದಾರೆ: ರಾಹುಲ್ ಗಾಂಧಿ

Update: 2021-11-19 05:36 GMT

ಹೊಸದಿಲ್ಲಿ: "ದೇಶದ ರೈತರು ಅಹಂಕಾರವನ್ನು ತಮ್ಮ ಸತ್ಯಾಗ್ರಹದಿಂದ ಸೋಲಿಸಿದ್ದಾರೆ. ಜೈ ಹಿಂದ್, ಜೈ ಹಿಂದ್,'' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾರ್ಮಿಕವಾಗಿ ಟ್ವೀಟ್ ಮಾಡಿದ್ದಾರೆ.

ರೈತರ ಸುದೀರ್ಘ ಪ್ರತಿಭಟನೆಗೆ ಕಾರಣವಾಗಿದ್ದ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುತ್ತಿರುವುದಾಗಿ ಇಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಬೆನ್ನಿಗೆ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಜತೆಗೆ ಈ ವರ್ಷದ ಜನವರಿಯಲ್ಲಿ ತಾವು ಮಾಡಿದ್ದ ಒಂದು ಟ್ವೀಟ್ ಅನ್ನೂ ಅವರು ಶೇರ್ ಮಾಡಿದ್ದಾರೆ.

"ನನ್ನ ಮಾತುಗಳನ್ನು ಗುರುತು ಮಾಡಿಟ್ಟುಕೊಳ್ಳಿ, ಈ ಸರಕಾರ  ರೈತ ವಿರೋಧಿ ಕೃಷಿ ಕಾನೂನುಗಳನ್ನು ವಾಪಸ್ ಪಡೆಯಬೇಕಾಗುತ್ತದೆ,'' ಎಂದು ರಾಹುಲ್ ಜನವರಿಯಲ್ಲಿ ಟ್ವೀಟ್ ಮಾಡಿದ್ದರು.

ರಾಹುಲ್ ಗಾಂಧಿ ಅವರಂತೆಯೇ ಹಲವಾರು ವಿಪಕ್ಷ ನಾಯಕರು ರೈತರನ್ನು ಅಭಿನಂದಿಸುವ ಜತೆಗೆ ಕೇಂದ್ರದ ಮೋದಿ ಸರಕಾರವನ್ನು ವ್ಯಂಗ್ಯವಾಡಿದ್ದಾರೆ.

"ಅಹಂಕಾರ ಸೋಲುತ್ತದೆ, ದುರಹಂಕಾರದಿಂದ  ಈಗ ಮೊಣಕಾಲೂರುವಂತಾಗಿದೆ,'' ಎಂದು ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒ' ಬ್ರಿಯಾನ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News