ರೈತರ ಪ್ರತಿಭಟನೆಯ ಕುರಿತ ಪೋಸ್ಟ್ ಗೆ ಜೀವ ಬೆದರಿಕೆ ಬಂದಿದೆ: ಕಂಗನಾ ರಣಾವತ್ ಆರೋಪ

Update: 2021-11-30 07:58 GMT
ಕಂಗನಾ ರಣಾವತ್ (PTI)

ಮುಂಬೈ: ಕೃಷಿ ಕಾನೂನು ಪ್ರತಿಭಟನಾಕಾರರ ಕುರಿತ ಪೋಸ್ಟ್‌ಗೆ  ಸಂಬಂಧಿಸಿ ತನಗೆ ಜೀವ ಬೆದರಿಕೆ ಬಂದಿದೆ ಎಂದು ನಟಿ ಕಂಗನಾ ರಣಾವತ್ ಈ ಕುರಿತಾಗಿ ಹಿಮಾಚಲ ಪ್ರದೇಶದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮಂಗಳವಾರ ರಣಾವತ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಅನುಯಾಯಿಗಳಿಗೆ ಈ ವಿಚಾರವನ್ನು ತಿಳಿಸಿದ್ದಾರೆ.

ಎಫ್‌ಐಆರ್ ಪ್ರತಿಯ ಚಿತ್ರವನ್ನು ಹಂಚಿಕೊಂಡಿರುವ ಕಂಗನಾ ಹಿಂದಿಯಲ್ಲಿ ಹೀಗೆ ಬರೆದಿದ್ದಾರೆ: "ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಯ ಹುತಾತ್ಮರನ್ನು ಸ್ಮರಿಸುತ್ತಾ ನಾನು ದೇಶದ್ರೋಹಿಗಳನ್ನು ಎಂದಿಗೂ ಕ್ಷಮಿಸುವುದಿಲ್ಲ ಅಥವಾ ಮರೆಯುವುದಿಲ್ಲ ಎಂದು ಬರೆದಿದ್ದೇನೆ. ಈ ರೀತಿಯ ಘಟನೆಯಲ್ಲಿ ದೇಶದ ಆಂತರಿಕ ದ್ರೋಹಿಗಳ ಕೈವಾಡವಿದೆ. ದೇಶದ್ರೋಹಿಗಳು ಹಣದ ದುರಾಸೆಯಲ್ಲಿ ಹಾಗೂ  ಕೆಲವೊಮ್ಮೆ ಸ್ಥಾನ ಮತ್ತು ಅಧಿಕಾರದ ದುರಾಸೆಯಲ್ಲಿ ಭಾರತಮಾತೆಗೆ ಕಳಂಕ ತರುವ ಒಂದೇ ಒಂದು ಅವಕಾಶವನ್ನು ಬಿಡಲಿಲ್ಲ ಮತ್ತು ದೇಶದೊಳಗಿನ ದೇಶದ್ರೋಹಿಗಳು ಪಿತೂರಿ ನಡೆಸಿ ದೇಶ ವಿರೋಧಿ ಶಕ್ತಿಗಳಿಗೆ ಸಹಾಯ ಮಾಡುತ್ತಲೇ ಇದ್ದಾರೆ. ನನ್ನ ಈ ಪೋಸ್ಟ್‌ನ ಮೇಲೆ ಬಟಿಂಡಾದ ಸಹೋದರನೊಬ್ಬ ನನ್ನನ್ನು ಕೊಲ್ಲುವುದಾಗಿ ಬಹಿರಂಗವಾಗಿ ಬೆದರಿಕೆ ಹಾಕಿದ್ದಾನೆ. ಈ ರೀತಿಯ ಬೆದರಿಕೆಗಳಿಗೆ ನಾನು ಹೆದರುವುದಿಲ್ಲ’’

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News