ರೈತರ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿದ ಪ್ರಕರಣ: ಮುಂಬೈ ಪೊಲೀಸರ ಮುಂದೆ ಹಾಜರಾದ ನಟಿ ಕಂಗನಾ

Update: 2021-12-23 16:40 GMT

ಮುಂಬೈ, ಡಿ. 23: ಸಿಖ್ಖ್ ಪ್ರತ್ಯೇಕತಾವಾದಿ ಗುಂಪು ಹಾಗೂ ರೈತರ ಪ್ರತಿಭಟನೆ ನಡುವೆ ನಂಟು ಆರೋಪಿಸಿ ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ ಪೋಸ್ಟ್ ವಿರುದ್ಧ ದಾಖಲಿಸಲಾದ ಎಫ್ಐಆರ್ಗೆ ಸಂಬಂಧಿಸಿ ನಟಿ ಕಂಗನಾ ರಣಾವತ್ ಅವರು ಗುರುವಾರ ಮುಂಬೈ ಪೊಲೀಸರ ಮುಂದೆ ಹಾಜರಾಗಿದ್ದಾರೆ. ರಣಾವತ್ ಅವರು ಬೆಳಗ್ಗೆ ಸುಮಾರು 11 ಗಂಟೆಗೆ ಖಾರ್ ಪೊಲೀಸ್ ಠಾಣೆ ತಲುಪಿದರು. ‌

ಸಿಖ್ಖ್ ಸಂಘಟನೆ ದೂರು ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಕಳೆದ ತಿಂಗಳು ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ವಿಚಾರಣೆಗ ಹಾಜರಾಗುವಂತೆ ಈ ತಿಂಗಳ ಆಂಭದಲ್ಲಿ ಪೊಲೀಸರು ನೋಟಿಸು ಜಾರಿ ಮಾಡಿದ್ದರು ಎಂದು ಅವರು ವಕೀಲ ರಿಝ್ವಾನ್ ಸಿದ್ದೀಖಿ ತಿಳಿಸಿದ್ದಾರೆ. ಡಿಸೆಂಬರ್ 22ರಂದು ಖಾರ್ ಪೊಲೀಸ್ ಅಧಿಕಾರಿಗಳ ಮುಂದೆ ಕಂಗನಾ ರಣಾವತ್ ಅವರು ಹಾಜರಾಗಲಿದ್ದಾರೆ ಎಂದು ಸಿದ್ದೀಖಿ ಬಾಂಬೆ ಉಚ್ಚ ನ್ಯಾಯಾಲಯಕ್ಕೆ ತಿಳಿಸಿದ್ದರು. ಅದಾಗ್ಯೂ, ಹಾಜರಾಗಲು ಇನ್ನೊಂದು ದಿನಾಂಕ ನೀಡುವಂತೆ ಅವರು ಬುಧವಾರ ಮನವಿ ಮಾಡಿದ್ದರು. ‌

ಪ್ರತ್ಯೇಕತಾವಾದಿಗಳ ಗುಂಪು ಹಾಗೂ ರೈತ ಪ್ರತಿಭಟನಕಾರರ ನಡುವೆ ಸಂಬಂಧ ಕಲ್ಪಿಸಿ ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್ ಹಾಕಿದ ಪ್ರಕರಣದ ಕುರಿತಂತೆ ಜನವರಿ 25ರ ವರೆಗೆ ಕಂಗನಾ ರಣಾವತ್ ಅವರನ್ನು ಬಂಧಿಸುವುದಿಲ್ಲ ಎಂದು ನಗರ ಪೊಲೀಸರು ಈ ಹಿಂದೆ ಬಾಂಬೆ ಉಚ್ಚ ನ್ಯಾಯಾಲಯಕ್ಕೆ ಭರವಸೆ ನೀಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News