ಪ್ರಾಚೀನ ಭಾರತೀಯ ನ್ಯಾಯ ಚಿಂತನೆಗಳನ್ನು ಇಂದಿನ ಕಾನೂನು ವಿದ್ಯಾರ್ಥಿಗಳಿಗೆ ಕಲಿಸಬೇಕು: ಜಸ್ಟಿಸ್ ಅಬ್ದುಲ್ ನಝೀರ್

Update: 2021-12-28 09:55 GMT
ಜಸ್ಟಿಸ್ ಅಬ್ದುಲ್ ನಝೀರ್ (Photo: deccanherald)

ಹೊಸದಿಲ್ಲಿ:  ಭಾರತದ ನ್ಯಾಯದಾನ ವ್ಯವಸ್ಥೆಯಲ್ಲಿ ಇನ್ನೂ ಆಳವಾಗಿ ಬೇರೂರಿರುವ ವಸಾಹತುಶಾಹಿ ಮನೋವೃತ್ತಿಯಿಂದ ಹೊರಬರಲು ಕಾನೂನು ವಿದ್ಯಾರ್ಥಿಗಳಿಗೆ ಪ್ರಾಚೀನ ಭಾರತದ ನ್ಯಾಯದಾನ ವ್ಯವಸ್ಥೆಯ ಕುರಿತು  ಅರಿವು ಮೂಡಿಸಬೇಕು. ಖ್ಯಾತನಾಮರಾದ ಮನು, ಕೌಟಿಲ್ಯ, ಬೃಹಸ್ಪತಿ ಕಾತ್ಯಾಯನ, ನಾರದ, ಯಾಜ್ಞವಲ್ಕ್ಯ ಮುಂತಾದವರ ಕಾನೂನು ಕುರಿತಾದ ಚಿಂತನೆಗಳನ್ನು ಅಳವಡಿಸಿಕೊಂಡು ಭಾರತದ ನ್ಯಾಯಾಂಗ ವ್ಯವಸ್ಥೆಗೆ ಇನ್ನಷ್ಟು ಬಲ ನೀಡಬೇಕು ಎಂದು ಸುಪ್ರೀಮ್ ಕೋರ್ಟ್ ನ್ಯಾಯಾಧೀಶ ಜಸ್ಟಿಸ್ ಅಬ್ದುಲ್ ನಝೀರ್ ಹೇಳಿದ್ದಾರೆ.

ಜಸ್ಟಿಸ್ ನಝೀರ್ ಅವರು ಹೈದರಾಬಾದ್‌ನಲ್ಲಿ ನಡೆದ ಅಖಿಲ ಭಾರತೀಯ ಅಧಿವಕ್ತ ಪರಿಷದ್ ಇದರ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ `ಡಿಕೊಲೋನೈಸೇಶನ್ ಆಫ್ ಇಂಡಿಯನ್ ಲೀಗಲ್ ಸಿಸ್ಟಂ' ಎಂಬ ವಿಷಯದ ಮೇಲೆ ಮಾತನಾಡುತ್ತಿದ್ದರು.

``ವಸಾಹತುಶಾಹಿಯ  ಸಂದರ್ಭದ ಕಾನೂನು ವ್ಯವಸ್ಥೆ ಭಾರತದ ಜನಸಂಖ್ಯೆಗೆ ಸೂಕ್ತವಲ್ಲ ಎಂಬುದು ನಿಸ್ಸಂಶಯ. ಕಾನೂನು ವ್ಯವಸ್ಥೆಯ ಭಾರತೀಕರಣ ಇಂದಿನ ಅಗತ್ಯ,'' ಎಂದು ಅವರು ಹೇಳಿದರು.

ಭವಿಷ್ಯದ ವಕೀಲರು ಹಾಗೂ ನ್ಯಾಯಾಧೀಶರ ಸಾಮರ್ಥ್ಯ, ಜ್ಞಾನ ಮತ್ತು ದೇಶಭಕ್ತಿಯ ಮೇಲೆ ಭಾರತದ ಕಾನೂನು ವ್ಯವಸ್ಥೆ ಹಾಗೂ ಸಂಸದೀಯ ಪ್ರಜಾಪ್ರಭುತ್ವ ಬಹಳಷ್ಟು ಅವಲಂಬಿತವಾಗಿದೆ,'' ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News