ಜಾರ್ಖಂಡ್: ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ 25 ರೂ. ವಿನಾಯತಿ

Update: 2021-12-29 17:52 GMT

ರಾಂಚಿ, ಡಿ. 29: ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ 25 ರೂಪಾಯಿ ಸಾಮೂಹಿಕ ವಿನಾಯಿತಿ ನೀಡಲು ಜಾರ್ಖಂಡ್ ಸರಕಾರ ನಿರ್ಧರಿದೆ ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಬುಧವಾರ ಘೋಷಿಸಿದ್ದಾರೆ.

  ಆದರೆ, ಮೋಟರ್ ಸೈಕಲ್ ಹಾಗೂ ಸ್ಕೂಟರ್ಗಳ ಸವಾರರಿಗೆ ಮಾತ್ರ ಈ ಪೆಟ್ರೋಲ್ ಬೆಲೆಯಲ್ಲಿ ವಿನಾಯತಿಯನ್ನು ಸರಕಾರ ನೀಡಲಿದೆ ಎಂದು ಅವರು ಹೇಳಿದ್ದಾರೆ.

2022 ಜನವರಿ 26ರಿಂದ ಈ ವಿನಾಯತಿ ಲಭ್ಯವಾಗಲಿದೆ ಎಂದು ಸೊರೇನ್ ಹೇಳಿದ್ದಾರೆ. ತನ್ನ ಸರಕಾರದ ಆಡಳಿತ ಅವಧಿ ಎರಡು ವರ್ಷಗಳನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಅವರು ಈ ಘೋಷಣೆ ಮಾಡಿದ್ದಾರೆ.
ಕಳೆದ ಕೆಲವು ತಿಂಗಳಿಂದ ತೈಲ ಬೆಲೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಆದರೆ, ತೈಲ ಬೆಲೆ ಕಳೆದ ಒಂದು ತಿಂಗಳಲ್ಲಿ ಬದಲಾಗದೆ ಹಾಗೇ ಉಳಿದ ಹಿನ್ನೆಲೆಯಲ್ಲಿ ಸೊರೇನ್ ಈ ಘೋಷಣೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News