ರಾಷ್ಟ್ರಮಟ್ಟದಲ್ಲಿ ಬಿಜೆಪಿಯನ್ನು ಎದುರಿಸಲು ಕೆಸಿಆರ್ ಯೋಜನೆಗೆ ದೇವೇಗೌಡ ಬೆಂಬಲ
Update: 2022-02-15 18:00 GMT
ಹೈದರಾಬಾದ್,ಫೆ.15: ರಾಷ್ಟ್ರಮಟ್ಟದಲ್ಲಿ ಬಿಜೆಪಿಯನ್ನು ಒಗ್ಗಟ್ಟಿನಿಂದ ಎದುರಿಸುವ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರ ಯೋಜನೆಯನ್ನು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಬೆಂಬಲಿಸಿದ್ದಾರೆ.
ಮಂಗಳವಾರ ಅಪರಾಹ್ನ ಕೆಸಿಆರ್ಗೆ ದೂರವಾಣಿ ಕರೆಯನ್ನು ಮಾಡಿದ ದೇವೇಗೌಡರು ಕೋಮುವಾದಿ ಶಕ್ತಿಗಳ ವಿರುದ್ಧ ಅವರ ಹೋರಾಟಕ್ಕೆ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ ಎಂದು ಮುಖ್ಯಮಂತ್ರಿಗಳ ಕಚೇರಿಯಲ್ಲಿನ ಮೂಲಗಳು ತಿಳಿಸಿವೆ.ಒಗ್ಗಟ್ಟಿನಿಂದ ಕಾರ್ಯ ಮಾಡಲು ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ತಾನು ಶೀಘ್ರ ಬೆಂಗಳೂರಿಗೆ ಭೇಟಿ ನೀಡುವುದಾಗಿ ಕೆಸಿಆರ್ ದೇವೇಗೌಡರಿಗೆ ತಿಳಿಸಿದರು ಎಂದು ಅವು ಹೇಳಿವೆ.
ಕೆಸಿಆರ್ ಈಗಾಗಲೇ ಹಲವಾರು ಪ್ರತಿಪಕ್ಷ ನಾಯಕರನ್ನು ಭೇಟಿಯಾಗಿದ್ದು,ಎಲ್ಲರನ್ನೂ ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಅವರ ಈ ಪ್ರಯತ್ನ ಇನ್ನೊಂದು ತೃತೀಯ ರಂಗಕ್ಕಾಗಿ ಮಾತುಕತೆಗಳಿಗೆ ಚಾಲನೆ ನೀಡಿದೆ.