​ಗೋರಖ್‌ಪುರ: ಬಾವಿಗೆ ಬಿದ್ದು ಬಾಲಕಿಯರು ಸೇರಿ 13 ಮಂದಿ ಮೃತ್ಯು

Update: 2022-02-17 04:46 GMT

ಗೋರಖ್‌ಪುರ: ಖುಷಿನಗರ ಜಿಲ್ಲೆಯಲ್ಲಿ ವಿವಾಹ ಸಂಬಂಧಿ ವಿಧಿವಿಧಾನದ ವೇಳೆ ಬಾವಿಗೆ ಬಿದ್ದು ಆರು ಮಂದಿ ಬಾಲಕಿಯರು ಮತ್ತು 7 ಮಂದಿ ಮಹಿಳೆಯರು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಬುಧವಾರ ರಾತ್ರಿ ನಡೆದಿದೆ.

ದುರಂತದಲ್ಲಿ ಗಾಯಗೊಂಡಿರುವ ಹಲವು ಮಂದಿ ಮಹಿಳೆಯರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಆದಿತ್ಯನಾಥ್, ಗಾಯಾಳುಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಜಿಲ್ಲೆಯ ನೌಬಿಯಾ ನವರಂಗಪುರದಲ್ಲಿ ‘ಹಲ್ದಿ’ ಶಾಸ್ತ್ರಕ್ಕಾಗಿ ಮಹಿಳೆಯರು ಬಾವಿಯ ಸುತ್ತ ಸೇರಿದ್ದರು. ಆದರೆ ಹಠಾತ್ತನೇ ಬಾವಿಕಟ್ಟೆ ಭಾರ ತಡೆದುಕೊಳ್ಳದೇ ಕುಸಿಯಿತು. ಬಾಲಕಿಯರು ಸೇರಿದಂತೆ ಹಲವು ಮಂದಿ ಮಹಿಳೆಯರು ಈ ಸಂದರ್ಭ ಬಾವಿಗೆ ಬಿದ್ದರು ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News