ಮಂಗಳೂರು: ಕೇಂದ್ರ ಸಚಿವರಿಂದ ಕೋಕ್ ಓವನ್ ಘಟಕಕ್ಕೆ ಶಂಕುಸ್ಥಾಪನೆ

Update: 2022-02-20 13:31 GMT

ಮಂಗಳೂರು, ಫೆ.20: ಪಣಂಬೂರಿನ ಕೆಐಒಸಿಎಲ್ ಲಿ.ನ ಬ್ಲಾಸ್ಟ್ ಫರ್ನೇಸ್ ಘಟಕದ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಕೋಕ್ ಓವನ್ ಘಟಕದ ನಿರ್ಮಾಣಕ್ಕೆ ಕೇಂದ್ರ ಉಕ್ಕು ಖಾತೆ ಸಚಿವ ರಾಮಚಂದ್ರ ಪ್ರಸಾದ್ ಸಿಂಗ್ ರವಿವಾರ ಶಂಕುಸ್ಥಾಪನೆ ನೆರವೇರಿಸಿದರು.

ಈ ಸಂದರ್ಭ ಕೆಐಒಸಿಎಲ್ ಲಿ. ಅಧ್ಯಕ್ಷರು ಮತ್ತು ಆಡಳಿತ ನಿರ್ದೇಶಕ ಸಾಮಿನಾಥನ್, ಕೇಂದ್ರ ಉಕ್ಕು ಸಚಿವಾಲಯದ ಜಂಟಿ ಕಾರ್ಯದರ್ಶಿ ಟಿ.ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News