ರಾಜಧಾನಿಯಲ್ಲಿ ಅಪ್ರಾಪ್ತ ಬಾಲಕಿಯ ಅತ್ಯಾಚಾರ, ಹತ್ಯೆ

Update: 2022-02-22 01:53 GMT

ಹೊಸದಿಲ್ಲಿ: ಹದಿನಾಲ್ಕು ವರ್ಷ ವಯಸ್ಸಿನ ಮಾನಸಿಕ ಅಸ್ವಸ್ಥೆ ಯುವತಿಯನ್ನು ಅಪಹರಿಸಿ, ಪ್ಲಾಸ್ಟಿಕ್ ಟೊಪ್ಪಿ ತಯಾರಿಸುವ ಘಟಕದಲ್ಲಿ ಕೂಡಿ ಹಾಕಿ ಸಾಮೂಹಿಕ ಅತ್ಯಾಚಾರ ನಡೆಸಿ ಹತ್ಯೆ ಮಾಡಿರುವ ಪೈಶಾಚಿಕ ಘಟನೆ ರಾಷ್ಟ್ರ ರಾಜಧಾನಿಯನ್ನು ಬೆಚ್ಚಿ ಬೀಳಿಸಿದೆ.

ಬಾಲಕಿಯ ಬಟ್ಟೆಯನ್ನೇ ಬಳಸಿ ಆಕೆಯನ್ನು ಹತ್ಯೆ ಮಾಡಿರುವ ಘಟನೆ ಫೆಬ್ರುವರಿ 12ರಂದು ರತ್ರಿ ನರೇಲಾ ಕೈಗಾರಿಕಾ ಪ್ರದೇಶ ಬಳಿಯ ಗ್ರಾಮದಲ್ಲಿ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.

ಬಾಲಕಿಗೆ ಇಬ್ಬರು ಶಂಕಿತರ ಪರಿಚಯ ಇರುವ ಕಾರಣದಿಂದ ಮತ್ತು ತಂದೆಯ ಬಳಿ ಘಟನೆ ಬಗ್ಗೆ ಹೇಳುವುದಾಗಿ ಬಾಲಕಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಆಕೆಯನ್ನು ಹತ್ಯೆ ಮಾಡಲಾಗಿದೆ ಎಂದು ತನಿಖಾಧಿಕಾರಿ ಹೇಳಿದ್ದಾರೆ. ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಇಬ್ಬರು ಆರೋಪಿಗಳು ಆಕೆಯ ಮೃತದೇಹವನ್ನು ಸೆಗಣಿ ಬೆರಣಿಯಡಿ ಹುದುಗಿಸಿ ಇಟ್ಟು, ಅಂಗಡಿ ಮಳಿಗೆಗೆ ಹೊರಗಿನಿಂದ ಬೀಗ ಜಡಿದು ಪರಾರಿಯಾಗಿದ್ದಾರೆ.

ಅಂಗಡಿಯ ಮಾಲೀಕ ಉತ್ತರ ಪ್ರದೇಶದ ಹರ್ದೋಯಿಗೆ ತೆರಳಿ ಒಂದು ವಾರದ ಬಳಿಕ ವಾಪಸ್ಸಾದಾಗ ಅಂಗಡಿಯ ಒಳಗಿನಿಂದ ಕೆಟ್ಟ ವಾಸನೆ ಬಂದಿದೆ. ಅಂಗಡಿ ತೆರೆದು ನೋಡಿದಾಗ ಅರ್ಧ ಕೊಳೆತ ಬಾಲಕಿಯ ದೇಹ ಪತ್ತೆಯಾಗಿದೆ ಎಂದು ವಿವರ ನೀಡಿದ್ದಾರೆ.

ಭಾನುವಾರ ರಾತ್ರಿ ಮುಂಬೈಗೆ ತೆರಳಲು ಸಿದ್ಧತೆ ನಡೆಸುತ್ತಿದ್ದ ಒಬ್ಬ ಶಂಕಿತ ಆರೋಪಿಯನ್ನು ಬಂಧಿಸಲಾಗಿದೆ. ಈ ಉತ್ಪಾದನಾ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಎರಡನೇ ಆರೋಪಿ ತಲೆ ಮರೆಸಿಕೊಂಡಿದ್ದಾನೆ. ಇಬ್ಬರೂ ಶಂಕಿತರು ವಿವಾಹಿತರಾಗಿದ್ದು, ಮಕ್ಕಳನ್ನು ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News