×
Ad

ಪ್ರಶಾಂತ್ ಕಿಶೋರ್ ಅವರ ಐ-ಪ್ಯಾಕ್ ಚುನಾವಣೆಯ ನಂತರ ಅಭ್ಯರ್ಥಿಗಳನ್ನು ಕೈಬಿಟ್ಟಿದೆ: ಗೋವಾ ತೃಣಮೂಲ ಅಸಮಾಧಾನ

Update: 2022-02-22 10:14 IST
Photo: @AITC4Goa/Twitter

ಪಣಜಿ: ಕಳೆದ ವಾರ ನಡೆದ ರಾಜ್ಯ ವಿಧಾನಸಭಾ ಚುನಾವಣೆಯ ನಂತರ ತಮ್ಮ ರಾಜಕೀಯ ಸಲಹೆಗಾರ ಐ-ಪಿಎಸಿ ಸಂಸ್ಥೆಯು ಪಕ್ಷದ ಅಭ್ಯರ್ಥಿಗಳನ್ನು ಕೈಬಿಟ್ಟಿದೆ ಎಂದು ಗೋವಾ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥ ಕಿರಣ್ ಕಂಡೋಲ್ಕರ್ ಹೇಳಿದ್ದಾರೆ.

ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಂಡೋಲ್ಕರ್ ಅವರು ತಾನು  ಟಿಎಂಸಿಯ ಗೋವಾ ಘಟಕದ ಮುಖ್ಯಸ್ಥ ಸ್ಥಾನವನ್ನು ತ್ಯಜಿಸುತ್ತಿಲ್ಲ ಎಂದರು.   ಆದರೆ ಐ-ಪಿಎಸಿ ಮುಖ್ಯಸ್ಥ ಪ್ರಶಾಂತ್ ಕಿಶೋರ್ ಹಾಗೂ  ಅವರ ತಂಡದೊಂದಿಗೆ ಕಂಡೋಲ್ಕರ್  ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷಕ್ಕೆ ಸಹಾಯ ಮಾಡಿದ್ದ ಐ-ಪಿಎಸಿ (ಭಾರತೀಯ ರಾಜಕೀಯ ಕ್ರಿಯಾ ಸಮಿತಿ) ಟಿಎಂಸಿಯೊಂದಿಗೆ ಭಿನ್ನಾಭಿಪ್ರಾಯ ಹೊಂದಿದೆ ಎಂಬ ಬಗ್ಗೆ ಕೆಲವು ಸಮಯದಿಂದ ಊಹಾಪೋಹ ಕೇಳಿಬರುತ್ತಿದೆ.

ಮಹಾರಾಷ್ಟ್ರವಾದಿ ಗೋಮಾಂತಕ್ ಪಾರ್ಟಿ (ಎಂಜಿಪಿ) ಜೊತೆ ಮೈತ್ರಿ ಮಾಡಿಕೊಂಡು ತೃಣಮೂಲ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದೆ.

ಫೆಬ್ರವರಿ 14 ರಂದು ಮತದಾನ ನಡೆದಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

ಕಂಡೋಲ್ಕರ್ ಅಲ್ಡೋನಾ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರೆ, ಅವರ ಪತ್ನಿ ಕವಿತಾ ತೃಣಮೂಲ ಟಿಕೆಟ್‌ನಲ್ಲಿ ಥಿವಿಮ್‌ನಿಂದ ಸ್ಪರ್ಧಿಸಿದ್ದರು.

ಗೋವಾದ ಬಹುತೇಕ ತೃಣಮೂಲ ಅಭ್ಯರ್ಥಿಗಳು ಚುನಾವಣೆಯ ನಂತರ ಐ-ಪಿಎಸಿಯಿಂದ ತಮ್ಮನ್ನು ಕೈಬಿಡಲಾಗಿದೆ ಎಂದು ಭಾವಿಸಿದ್ದಾರೆ ಎಂದು ಕಂಡೋಲ್ಕರ್ ಹೇಳಿದ್ದಾರೆ.

"ಟಿಎಂಸಿಯಿಂದ ಸ್ಪರ್ಧಿಸಿರುವ ಎಲ್ಲಾ ಅಭ್ಯರ್ಥಿಗಳು ಐ-ಪಿಎಸಿಯೊಂದಿಗೆ ಕೆಲವು ಅಥವಾ ಇತರ ಸಮಸ್ಯೆಗಳನ್ನು ಹೊಂದಿದ್ದಾರೆ. ಅಭ್ಯರ್ಥಿಗಳು ತಮ್ಮ ಸಮಸ್ಯೆಗಳನ್ನು ಪ್ರಶಾಂತ್ ಕಿಶೋರ್ ಮತ್ತು ಅವರ ಐ-ಪಿಎಸಿ ತಂಡದೊಂದಿಗೆ ಹೇಳಿದಾಗ  ನಾನು ನನ್ನ ಪಕ್ಷದ ಕಾರ್ಯಕರ್ತರೊಂದಿಗೆ ಈ ವಿಷಯವನ್ನು ಚರ್ಚಿಸಿದ್ದೇನೆ. ಟಿಎಂಸಿ ಗೋವಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಕಾರ್ಯಕರ್ತರು ನನಗೆ ಸಲಹೆ ನೀಡಿದರು.   ನಾನು ಟಿಎಂಸಿ ಗೋವಾ ಮುಖ್ಯಸ್ಥ ಸ್ಥಾನವನ್ನು ತೊರೆಯುತ್ತಿಲ್ಲ.  ಆದರೆ ಪ್ರಶಾಂತ್ ಕಿಶೋರ್ ಮತ್ತು ಐ-ಪಿಎಸಿ ತಂಡದ ಬಗ್ಗೆ ನನಗೆ ಅಸಮಾಧಾನವಿದೆ" ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News