×
Ad

"ಜನರಿಗಾಗಿ ಇರುವ ಸರಕಾರವಾದರೆ ಬಂಡವಾಳಶಾಹಿಗಳನ್ನು ಪ್ರೋತ್ಸಾಹಿಸುವುದಿಲ್ಲ": ಕೇಂದ್ರದ ವಿರುದ್ಧ ವರುಣ್ ಗಾಂಧಿ ಕಿಡಿ

Update: 2022-02-22 14:29 IST

ಹೊಸದಿಲ್ಲಿ: ಬ್ಯಾಂಕುಗಳು ಮತ್ತು ರೈಲ್ವೆಯ ಖಾಸಗೀಕರಣ  ಕುರಿತಂತೆ ಸರಕಾರದ ಉದ್ದೇಶದ ಬಗ್ಗೆ ತಮ್ಮ ಕಳವಳ ವ್ಯಕ್ತಪಡಿಸಿರುವ ಬಿಜೆಪಿ ಸಂಸದ ವರುಣ್ ಗಾಂಧಿ, ಸರಕಾರದ ಕ್ರಮ ದೊಡ್ಡ ಮಟ್ಟದ ಉದ್ಯೋಗ ನಷ್ಟಕ್ಕೆ ಕಾರಣವಾಗಲಿದೆ ಎಂದು ಹೇಳಿದ್ದಾರೆ.

"ಕೇವಲ ಬ್ಯಾಂಕುಗಳು ಮತ್ತು ರೈಲ್ವೆಯ ಖಾಸಗೀಕರಣವು 5 ಲಕ್ಷ ಉದ್ಯೋಗ ನಷ್ಟಕ್ಕೆ ಕಾರಣವಾಗಲಿದೆ. ಪ್ರತಿ ಉದ್ಯೋಗ ಕಳೆದುಕೊಳ್ಳುವುದರೊಂದಿಗೆ  ಲಕ್ಷಗಟ್ಟಲೆ ಕುಟುಂಬಗಳ ಆಸೆಆಕಾಂಕ್ಷೆಗಳು ಕಮರಿಹೋಗಲಿವೆ. ಜನರ ಕಲ್ಯಾಣಕ್ಕೆ ಶ್ರಮಿಸುವ ಸರಕಾರವೊಂದು ಈ ರೀತಿ ಬಂಡಾಳಶಾಹಿತ್ವವನ್ನು ಉತ್ತೇಜಿಸಿ ಸಮಾಜದಲ್ಲಿ ಅಸಮಾನತೆಯನ್ನು ಪ್ರೋತ್ಸಾಹಿಸುವಂತಿಲ್ಲ" ಎಂದು ಅವರು ಹೇಳಿದರು.

ಬಿಜೆಪಿ ಸಂಸದನಾಗಿದ್ದುಕೊಂಡು ಆಗಾಗ ಕೇಂದ್ರ ಸರಕಾರವನ್ನು ಟೀಕಿಸುತ್ತಲೇ ಬಂದಿರುವ ವರುಣ್ ಗಾಂಧಿ, ಕಳೆದ ವಾರ ಎಬಿಜಿ ಶಿಪ್ ಯಾರ್ಡ್ ಹಗರಣವನ್ನು ದೇಶದ ಅತ್ಯಂತ ದೊಡ್ಡ ಆರ್ಥಿಕ ಹಗರಣವೆಂದು ಬಣ್ಣಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News