×
Ad

ಗುಜರಾತ್‌ನ ಪಠ್ಯಕ್ರಮದಲ್ಲಿ ಭಗವದ್ಗೀತೆ: ಸಚಿವರನ್ನು ಟೀಕಿಸಿದ ಎಎಪಿ ನಾಯಕ ಸಿಸೋಡಿಯಾ

Update: 2022-03-18 14:20 IST

ಹೊಸದಿಲ್ಲಿ : ಗುಜರಾತ್ ಸರಕಾರವು 6 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಪಠ್ಯಕ್ರಮದಲ್ಲಿ ಭಗವದ್ಗೀತೆ ಪರಿಚಯಿಸುವ ಕುರಿತಾಗಿ  ಘೋಷಿಸಿದ ಒಂದು ದಿನದ ನಂತರ  ದಿಲ್ಲಿ  ಉಪ ಮುಖ್ಯಮಂತ್ರಿ ಹಾಗೂ  ಶಿಕ್ಷಣ ಸಚಿವ ಮನೀಶ್ ಸಿಸೋಡಿಯಾ ಇಂದು ಗುಜರಾತ್  ರಾಜ್ಯ ಸಚಿವರನ್ನು ಟೀಕಿಸುವ ಜೊತೆಗೆ  ಈ ಕ್ರಮವನ್ನು ಸ್ವಾಗತಿಸಿದ್ದಾರೆ.

"ಖಂಡಿತವಾಗಿಯೂ  ಇದು ಉತ್ತಮ ಹೆಜ್ಜೆ.  ಆದರೆ ಅದನ್ನು ಪರಿಚಯಿಸುವ ಜನರು ಮೊದಲು ಗೀತಾ ಮೌಲ್ಯಗಳನ್ನು ಅಭ್ಯಾಸ ಮಾಡಬೇಕಾಗಿದೆ. ಅವರ ಕಾರ್ಯಗಳು ರಾವಣನಂತೆ ಹಾಗೂ  ಅವರು ಗೀತಾ ಬಗ್ಗೆ ಮಾತನಾಡುತ್ತಾರೆ" ಎಂದು ಸಿಸೋಡಿಯಾ ANI ಗೆ ತಿಳಿಸಿದರು.

2022-23ರ ಶೈಕ್ಷಣಿಕ ವರ್ಷದಿಂದ ಗುಜರಾತ್‌ನಲ್ಲಿ 6 ರಿಂದ 12 ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲಾ ಪಠ್ಯಕ್ರಮದ ಭಾಗವಾಗಿ ಭಗವದ್ಗೀತೆಯನ್ನು ಪರಿಚಯಿಸಲಾಗುವುದು ಎಂದು ಗುಜರಾತ್ ಶಿಕ್ಷಣ ಸಚಿವ ಜಿತು ವಘಾನಿ ಗುರುವಾರ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News