ಮಂಜೇಶ್ವರ: ನಾಲ್ವರು ಆರೋಪಿಗಳ ಬಂಧನ: ಗೂಂಡಾ ಕಾಯ್ದೆ 'ಕಾಪಾ'ದಡಿ ಪ್ರಕರಣ ದಾಖಲು

Update: 2022-03-23 10:53 GMT

ಕಾಸರಗೋಡು, ಮಾ.23: ಹಲವು  ಪ್ರಕರಣಗಳಲ್ಲಿ  ಶಾಮೀಲಾಗಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಮಂಜೇಶ್ವರ ಪೊಲೀಸರು ಬಂಧಿತರ ವಿರುದ್ಧ ಗೂಂಡಾ ಕಾಯ್ದೆಯಾದ ಕಾಪಾ(Kerala Anti-social Activities (Prevention) Act )ವನ್ನು ಹೇರಿದ್ದಾರೆ.

ಕಡಂಬಾರ್ ಮೊರತ್ತಣೆಯ ಮುಹಮ್ಮದ್ ಅಸ್ಗರ್(25), ಮೀಯಪದವಿನ ಇಬ್ರಾಹೀಂ ಅರ್ಷದ್(26), ಉಪ್ಪಳದ ರೌಫ್ (41)  ಮತ್ತು ದೀಪಕ್ (36) ಬಂಧಿತ ಆರೋಪಿಗಳಾಗಿದ್ದಾರೆ.
ಅಸ್ಗರ್ ವಿರುದ್ಧ ದರೋಡೆ , ಕೊಲೆ ಯತ್ನ,  ಮಾದಕ ವಸ್ತು ಸಾಗಾಟ, ಗುಂಡು ಹಾರಾಟ ನಡೆಸಿದ ಆರೋಪ , ಅರ್ಷದ್ ವಿರುದ್ಧ ಕೊಲೆ, ಶೂಟೌಟ್ ಸೇರಿದಂತೆ ಕುಂಬಳೆ, ಮಂಜೇಶ್ವರ ಠಾಣೆಯಲ್ಲಿ ಏಳಕ್ಕೂ ಅಧಿಕ ಪ್ರಕರಣಗಳಿವೆ. ರೌಫ್ ಹಲವು ಕಳವು ಪ್ರಕರಣಗಳ ಆರೋಪಿಯಾಗಿದ್ದರೆ,  ದೀಪಕ್ ವಿರುದ್ಧ ಕೊಲೆ ಯತ್ನ, ಮದ್ಯ ಸಾಗಾಟ ಪ್ರಕರಣಗಳು ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಎಲ್ಲಾ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News