ನೇಣು ಬಿಗಿದು ಆತ್ಮಹತ್ಯೆ

Update: 2022-05-05 16:04 GMT

ಬ್ರಹ್ಮಾವರ : ವಿವಿಧ ಕಾಯಿಲೆಗಳಿಂದ ಬೇಸತ್ತು ೯೨ ವರ್ಷ ಪ್ರಾಯದ ಹಿರಿಯರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಚೇರ್ಕಾಡಿ ಗ್ರಾಮದ ದೂಪದಕಟ್ಟೆ ಎಂಬಲ್ಲಿಂದ ವರದಿಯಾಗಿದೆ.

ಮೃತರನ್ನು ದೂಪದಕಟ್ಟೆಯ ನಾರಾಯಣ ಶೆಟ್ಟಿಗಾರ್ (92) ಎಂದು ಗುರುತಿಸಲಾಗಿದೆ. 10 ವರ್ಷಗಳ ಹಿಂದೆ ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ಪಡೆದಿದ್ದ ಇವರು ಇತ್ತೀಚೆಗೆ ಜ್ವರ ಹಾಗೂ ಉಬ್ಬಸ ಕಾಯಿಲೆಯಿಂದ ಬಳಲುತಿದ್ದರು. ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ನಿನ್ನೆ ಮಧ್ಯಾಹ್ನದ ವೇಳೆ ಮನೆಯ ಎದುರಿನ ಮಾವಿನಮರದ ಕೊಂಬೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News