ಬೊಳ್ಳೂರು : ನೂರೇ ಅಜ್ಮೀರ್ ಕಾರ್ಯಕ್ರಮ

Update: 2022-05-25 17:58 GMT

ಮುಲ್ಕಿ: ಶಂಸುಲ್ ಉಲಮಾ ಮೆಮೋರಿಯಲ್ ಫೌಂಡೇಶನ್ ಹಿಫ್ಳುಲ್ ಕುರ್ ಆನ್ ಕಾಲೇಜು ಬೊಳ್ಳೂರು ಹಳೆಯಂಗಡಿ ಇದರ ವತಿಯಿಂದ ಬೃಹತ್ ಆಧ್ಯಾತ್ಮಿಕ ನೂರೇ ಅಜ್ಮೀರ್ ಸಂಗಮವು ಮಂಗಳವಾರ ರಾತ್ರಿ ಮರ್ ಹೂಮ್‌ ಅಬ್ದುಲ್ಲಾ ಉಸ್ತಾದ್ ವೇದಿಕೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಮರ್ ಹೂಮ್ ಶೈಖುನಾ ಮಿತ್ತಬೈಲ್ ಉಸ್ತಾದರ ಪುತ್ರ ಇರ್ಷಾದ್ ಹುಸೈನ್ ದಾರಿಮಿ ಅಲ್ - ಜಝರಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಶಂಸುಲ್ ಉಲಮಾ ಮೆಮೋರಿಯಲ್ ಫೌಂಡೇಶನ್ ಅಧ್ಯಕ್ಷ  ಬಿ.ಇ. ಮುಹಮ್ಮದ್ ಎಮ್ ಇ ಎಫ್  ವಹಿಸಿದ್ದರು.

ಶಂಸುಲ್ ಉಲಮಾ ಮೆಮೋರಿಯಲ್ ಫೌಂಡೇಶನ್ ಗೌರವಾಧ್ಯಕ್ಷ  ಶೈಖುನಾ ಮುಹಮ್ಮದ್ ಅಝ್ಹರ್ ಫೈಝಿ ಬೊಳ್ಳೂರು ಉಸ್ತಾದ್ ದುಆ ಆಶೀರ್ವಚನ ಗೈದರು. ಕೆ.ಆರ್. ಹುಸೈನ್ ದಾರಿಮಿ ರೇಂಜಲಾಡಿ ಮತ್ತು ಇಕ್ಬಾಲ್ ಬಾಳಿಲ ಪ್ರಾಸ್ತಾವಿಕ ಮಾತನಾಡಿದರು. 

ಬೃಹತ್ ಆಧ್ಯಾತ್ಮಿಕ ನೂರೇ ಅಜ್ಮೀರ್ ಸಂಗಮಕ್ಕೆ ವಲಿಯುದ್ದೀನ್ ಫೈಝಿ ವಾಝಕ್ಕಾಡ್ ಕೇರಳ ನೇತೃತ್ವ ನೀಡಿದರು. ಇದೇ ಸಂದರ್ಭ ಶಂಸುಲ್ ಉಲಮಾ ಮೆಮೋರಿಯಲ್ ಫೌಂಡೇಶನ್ ಹಿಫ್ಳುಲ್ ಕುರ್ ಆನ್ ಕಾಲೇಜು ಬೊಳ್ಳೂರು ಹಳೆಯಂಗಡಿ ಇದರ ಸರ್ವತೋಮುಖ ಅಭಿವೃದ್ಧಿಗೆ ಅವಿರತ ಶ್ರಮಿಸುತ್ತಿರುವ ಶೈಖುನಾ ಬೊಳ್ಳೂರು ಉಸ್ತಾದ್, ಇನಾಯತ್ ಅಲಿ, ಅಬ್ದುಲ್ ರಝಾಕ್ ಮೂಡುತೋಟ ಸಾಗ್, ಅಬೂಬಕರ್ ಇಂದಿರಾನಗರ,  ವಲಿಯುದ್ದೀನ್ ಫೈಝಿ ಅವರನ್ನು ಅತಿಥಿಗಣ್ಯರು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಿದರು.

ದ.ಕ. ಜಿಲ್ಲಾ ಎಸ್ ವೈ ಎಸ್ ಅಧ್ಯಕ್ಷ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಇಸ್ಮಾಯೀಲ್ ಫೈಝಿ, ಸಲೀಂ ಫೈಝಿ ಇರ್ಫಾನ್, ಮುಸ್ತಫ ಅನ್ಸಾರಿ  ಶರೀಫ್ ದಾರಿಮಿ ಅಲ್ ಹೈತಮಿ, ಅಬ್ದುಲ್ಲಾ ಝೈನಿ,  ಆದಮ್‌ ಅಮಾನಿ, ಅಬ್ದುಲ್ ಕರೀಮ್‌ ದಾರಿಮಿ, ಇಸ್ಮಾಯೀಲ್ ದಾರಿಮಿ, ಅಬೂಬಕರ್ ಮದನಿ, ಅಬ್ದುಲ್ಲಾ ಮದನಿ, ಇಮ್ರಾನ್ ಮಖದೂಮಿ, ಅಬ್ದುಲ್ ಸಮದ್‌ಹುದವಿ, ಅಬ್ದುಲ್‌ರಝಾಕ್ ಅಝ್ ಹರಿ, ಹನೀಫ್ ಮುಸ್ಲಿಯಾರ್ ಮುತ್ತಬೈಲ್, ಹಾಜಿ ಅಬ್ದುಲ್ ರೆಹಮಾನ್ ಕಣ್ಣಂಗಾರ್, ಹಾಜಿ ಉಸ್ಮಾನ್ ಏರ್ ಇಂಡಿಯಾ, ನೌಶಾದ್ ಹಾಜಿ ಸೂರಲ್ಪಾಡಿ, ಶರೀಫ್ ಕುವೈಟ್, ಅಬ್ದುಲ್ ರಝಾಕ್ ಸಚ್ಚೆರಿ ಪೇಟೆ, ಶರೀಫ್ ನ್ಯಾಶನಲ್‌, ಮುಹಮ್ಮದ್ ನುರಾನಿಯಾ, ಮೊಯ್ದಿನಬ್ಬ ಹಾಜಿ, ರಫೀಕ್ ಹಾಜಿ ತೋಡಾರು, ಮುಹಮ್ಮದ್‌ರಫೀಕ್ ಕರಾವಳಿ‌ ಮಾರ್ಬಲ್ಸ್‌, ಯೂಸುಫ್ ಹಾಜಿ ಸೂರಲ್ಪಾಡಿ ಶರೀಫ್ ಜೋಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News