ಉಳ್ಳಾಲ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಉದ್ಘಾಟನೆ

Update: 2022-06-07 13:29 GMT

ಉಳ್ಳಾಲ : ಮಹಾಕವಿಗಳೇ ಮೆಚ್ಚಿದ ಸಾಹಿತ್ಯ ಚುಟುಕು ಪ್ರಕಾರವಾಗಿದೆ. ನಾಲ್ಕೇ ಸಾಲುಗಳಲ್ಲಿ ಬದುಕಿನ ಸಂಸ್ಕಾರ ಕಲಿಸಿ ಕೊಡುವ ಸಾಮರ್ಥ್ಯ ಚುಟುಕಿಗಿದೆ’ ಎಂದು ಸಾಹಿತಿ ಚುಟುಕು ಸಾಹಿತ್ಯ ಪರಿಷತ್ತಿನ ದ.ಕ. ಜಿಲ್ಲಾ ಗೌರವಾಧ್ಯಕ್ಷ ಇರಾ ನೇಮು ಪೂಜಾರಿ ಹೇಳಿದರು.

ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಸಭಾಂಗಣದಲ್ಲಿ ರವಿವಾರ ಚುಟುಕು ಸಾಹಿತ್ಯ ಪರಿಷತ್ತಿನ ಉಳ್ಳಾಲ ತಾಲೂಕು ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದ.ಕ.ಚುಸಾಪ ಅಧ್ಯಕ್ಷ ಹರೀಶ ಸುಲಾಯ ಒಡ್ಡಂಬೆಟ್ಟು ಅವರು ಉಳ್ಳಾಲ ತಾಲೂಕು ಘಟಕದ ಅಧ್ಯಕ್ಷ ಎಡ್ವರ್ಡ್ ಲೋಬೋ ತೊಕ್ಕೊಟ್ಟು, ಕಾರ್ಯದರ್ಶಿ ವಾಣಿ ಲೋಕಯ್ಯ, ಉಪಾಧ್ಯಕ್ಷ ಎಂ.ಎಸ್.ವೆಂಕಟೇಶ್ ಗಟ್ಟಿ, ಜತೆ ಕಾರ್ಯದರ್ಶಿಗಳಾದ ಗುಣವತಿ ಕಿನ್ಯ, ಅರ್ಚನಾ ಎಂ.ಬಂಗೇರಾ ಕುಂಪಲ, ಕೋಶಾಧಿಕಾರಿ ಯೋಗೀಶ್ ಮಲ್ಲಿಗೆಮಾಡು, ಗೌರವ ಸಲಹೆಗಾರ ಗುಣಾಜೆ ರಾಮಚಂದ್ರ ಭಟ್, ಸಮಿತಿಯ ಸದಸ್ಯರಾದ ಬಶೀರ್ ಅಹ್ಮದ ಕಿನ್ಯ, ಎಸ್.ಕೆ.ಕುಂಪಲ, ವಲೇರಿಯನ್ ಸಿಕ್ವೇರಾ ಅವರಿಗೆ ಪದಗ್ರಹಣ ಮಾಡಿದರು.

ಅತಿಥಿಯಾಗಿ ಸಾರಂಗ್ ಎಫ್ ಎಂ ನಿರ್ದೇಶಕ ಫಾ. ಮೆಲ್ವಿನ್ ಪಿಂಟೋ, ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಿವರಾಮ ಕಾಸರಗೋಡು ಭಾಗವಹಿಸಿದ್ದರು.

ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಾ.ವೀ.ಕೃಷ್ಣದಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಹಿತಿ ಗುಣಾಜೆ ರಾಮಚಂದ್ರ ಭಟ್ ಅವರನ್ನು ಕನ್ನಡ ಮತ್ತು ಹವ್ಯಕ ಭಾಷಾ ಸಾಹಿತ್ಯ ಸೇವೆಗಾಗಿ ಸನ್ಮಾನಿಸಲಾಯಿತು. ಪರಿಸರ ದಿನದ ಪ್ರಯುಕ್ತ ಹವ್ಯಾಸಿ ಕಲಾವಿದ ರಾಮಾಂಜಿ ಅವರು ಪ್ರಕೃತಿ ಗೀತೆ ಹಾಡಿದರು.

ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರೂಪಕ ಪ್ರವೀಣ್ ಅಮ್ಮೆಂಬಳ ಅವರ ಅಧ್ಯಕ್ಷತೆಯಲ್ಲಿ ನಡೆದ ಬಹುಭಾಷಾ ಕವಿಗೋಷ್ಠಿಯಲ್ಲಿ ಗುಣಾಜೆ ರಾಮಚಂದ್ರ ಭಟ್, ವಲೇರಿಯನ್ ಸಿಕ್ವೇರಾ, ಎಸ್.ಕೆ.ಕುಂಪಲ,ವಾಣಿ ಲೋಕಯ್ಯ,ಸುಮಂಗಲ ದಿನೇಶ್ ಶೆಟ್ಟಿ, ದೀಕ್ಷಿತಾ ಕೊಳ್ಯೂರು, ಲತಾ ವಿಕ್ರಮದತ್ತ, ಕಿರಣ್‌ರಾಜ್, ಎಡ್ವರ್ಡ್ ಲೋಬೋ, ಎಂ.ಎಸ್. ವೆಂಕಟೇಶ್ ಗಟ್ಟಿ, ಯೋಗೀಶ್ ಮಲ್ಲಿಗೆಮಾಡು, ಗುಣವತಿ ಕಿನ್ಯ, ಆಕೃತಿ ಐಎಸ್ ಭಟ್, ರಮಿತಾ ಕುತ್ತಾರ್, ಪಂಕಜ ಕೆ.ಮುಡಿಪು, ಕಾಂಚನ ಕೋಟೆಕಾರ್, ಅರ್ಚನಾ ಎಂ.ಕುಂಪಲ, ಖುಷಿ ಕೊಂಡಾಣ, ಶ್ರೀನಿವಾಸ, ಮನ್ಸೂರ್ ಮುಲ್ಕಿ, ಕಾಂಚನ, ಉಮ್ಮರ್ ಫಾರೂಕ್, ಚಂದ್ರಿಕಾ, ಡಾ.ಸುರೇಶ್ ನೆಗಳಗುಳಿ, ರೇಮಂಡ್ ಡಿಕುನ್ಹ ಕವನಗಳನ್ನು ವಾಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News