ಪುತ್ತಿಗೆಯಲ್ಲಿ ಯಂತ್ರಶ್ರೀ ತರಬೇತಿ ಕಾರ್ಯಾಗಾರ
Update: 2022-06-09 16:35 GMT
ಉಡುಪಿ, ಜೂ.೯: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಉಡುಪಿ ತಾಲೂಕು ಇವರ ಆಶ್ರಯದಲ್ಲಿ ಹಿರಿಯಡ್ಕ ವಲಯದ ಪುತ್ತಿಗೆಯ ಜಯಲಕ್ಷ್ಮೀ ವೀರೇಂದ್ರ ಹೆಗ್ಡೆ ಇವರ ಮನೆಯ ಆವರಣದಲ್ಲಿ ಯಂತ್ರಶ್ರೀ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಜಿಲ್ಲೆಯ ಹಿರಿಯ ನಿರ್ದೇಶಕರಾದ ಶಿವರಾಯ ಪ್ರಭು ಅವರು ದೀಪ ಬೆಳಗಿಸುವ ಮೂಲಕ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿದರು. ಕಾರ್ಯಾಗಾರದಲ್ಲಿ ಉಡುಪಿ ತಾಲೂಕಿನ ಪೆರ್ಡೂರು ಹಾಗೂ ಹಿರಿಯಡ್ಕ ವಯದ ಸೇವಾ ಪ್ರತಿನಿಧಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ತಾಲೂಕಿನ ಯೋಜನಾಧಿಕಾರಿ ರಾಮ ಎಂ., ಕರಾವಳಿ ಪ್ರಾದೇಶಿಕ ಸಿಎಚ್ಎಸ್ಸಿ ಯೋಜನಾಧಿಕಾರಿ ಹರೀಶ್, ಭತ್ತದ ಸಸಿ ಮಡಿ ತಯಾರಿಸುವ ಕೃಷಿಕರಾದ ಜಯಲಕ್ಷ್ಮೀ ವೀರೇಂದ್ರ ಹೆಗ್ಡೆ, ತಾಲೂಕು ಕೃಷಿ ಅಧಿಕಾರಿ ಎಂ.ರಾಘವೇಂದ್ರ ಆಚಾರ್ಯ, ಪೆರ್ಡೂರು ವಲಯ ಮೇಲ್ವಿಚಾರಕ ಸುಧೀರ್ ಹಿರಿಯಡ್ಕ, ವಲಯ ಮೇಲ್ವಿಚಾರಕರಾದ ಸಂತೋಷ್ ಹಾಗೂ ಸಿಎಚ್ಎಸ್ಸಿ ಪ್ರಬಂಧಕ ಅರ್ಪಿತ್ ಉಪಸ್ಥಿತರಿದ್ದರು.