ಯುವಕ ಅನುಮಾನಾಸ್ಪದ ಮೃತ್ಯು; ದೂರು

Update: 2022-06-09 16:39 GMT

ಬೈಂದೂರು : ಜೂ.6ರಂದು ಬೆಳಗ್ಗೆ  ಕೆಲಸಕ್ಕೆ ಹೋಗುವು ದಾಗಿ ತಾಯಿಗೆ ತಿಳಿಸಿ ಮನೆಯಿಂದ ತೆರಳಿದ್ದ ಮಂಜುನಾಥ ದೇವಾಡಿಗ (38) ಎಂಬ ಯುವಕನ ಮೃತದೇಹ ಇಂದು ಬೆಳಗ್ಗೆ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾದ ಘಟನೆ ವರದಿಯಾಗಿದೆ.

ಕೆಲಸದ ತೆರಳಿದ ಮಂಜುನಾಥ ದೇವಾಡಿಗ ರಾತ್ರಿ 8ಗಂಟೆಯಾದರೂ ಮನೆಗೆ ಮರಳದಿದ್ದಾಗ ಆತನ ಮೊಬೈಲ್‌ಗೆ ಕರೆ ಮಾಡಿದಾಗ ಕರೆಯನ್ನು ಸ್ವೀಕರಿಸಿರಲಿಲ್ಲ. ಮನೆಯವರೆಲ್ಲರೂ ಸೇರಿ ಆತನಿಗಾಗಿ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ.

ಇಂದು ಮುಂಜಾನೆ ೭:೪೫ರ ಸುಮಾರಿಗೆ ಸುರೇಶ್ ದೇವಾಡಿಗ ಎಂಬವರು ದೂರವಾಣಿ ಕರೆ ಮಾಡಿ ಕೆರ್ಗಾಲ್ ಗ್ರಾಮದ ನಾಯ್ಕನಕಟ್ಟೆ ರಾಷ್ಟ್ರೀಯ ಹೆದ್ದಾರಿ ೬೬ರ ಬದಿಯ ಖಾಲಿ ಜಾಗದಲ್ಲಿ ಮೃತದೇಹ ಇರುವುದಾಗಿ ತಿಳಿಸಿದ್ದು, ಅದರಂತೆ ಹೋಗಿ ನೋಡಿದಾಗ ಅದು ಮಂಜುನಾಥ ದೇವಾಡಿಗ ಅವರ ಮೃತದೇಹವಾಗಿತ್ತು. ತನ್ನ ಅಳಿಯನ ಮರಣದಲ್ಲಿ ಅನುಮಾನವಿರುವುದಾಗಿ ಮೃತನ ಸೋದರ ಮಾವ ಕಂಬದಕೋಣೆ ಗ್ರಾಮದ ಪಡುವಾಯನ ಮನೆಯ ವೀರಭದ್ರ ದೇವಾಡಿಗ ಬೈಂದೂರು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದು, ಇದರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News