ಪ್ರಜ್ಞಾ ಸಿಂಗ್‌ ಗೆ ಭಾರತದಲ್ಲಿರಲು ಭಯವಾಗುವುದಾದರೆ ಪಾಕಿಸ್ತಾನಕ್ಕೆ ಹೋಗಲಿ: ಮಿರ್ಚಿ ಬಾಬಾ ಹೇಳಿಕೆ

Update: 2022-06-20 11:27 GMT

ಹೊಸದಿಲ್ಲಿ: ಬಿಜೆಪಿ ಸಂಸದೆ ಹಾಗೂ ಭಯೋತ್ಪಾದನಾ ಪ್ರಕರಣದ ಆರೋಪಿಯಾಗಿರುವ ಪ್ರಜ್ಞಾ ಸಿಂಗ್‌, ತನಗೆ ದಾವೂದ್‌ ಇಬ್ರಾಹೀಂ ಕಡೆಯಿಂದ ಬೆದರಿಕೆ ಬಂದಿದೆ ಎಂದು ಹೇಳಿಕೊಂಡಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿದ ನಿರಂಜನ ಅಖಾಡದ ಮಹಾಮಂಡಲೇಶ್ವರ ಹಾಗೂ ಹಿಂದೂ ಧರ್ಮಗುರು ಮಿರ್ಚಿ ಬಾಬಾ ಪ್ರಜ್ಞಾ ಸಿಂಗ್‌ ಗೆ ಭಾರತದಲ್ಲಿ ಭಯವಾಗುವುದಾದರೆ ಪಾಕಿಸ್ತಾನಕ್ಕೆ ಹೋಗಲಿ ಎಂದು ಹೇಳಿಕೆ ನೀಡಿದ್ದಾರೆ. 

ಮಾಧ್ಯಮಗಳೊಂದಿಗೆ ಈ ಕುರಿತು ಮಾತನಾಡಿದ ಮಿರ್ಚಿ ಬಾಬಾ "ಇದೆಲ್ಲವೂ ಆಕೆಯ ಒಂದು ಗಿಮಿಕ್‌ ಮಾತ್ರ. ಈಗಾಗಲೇ ರಕ್ತ ಮೆತ್ತಿಕೊಂಡಿರುವ ಕೈಗಳಿಗೆ ಯಾರು ಬೆದರಿಕೆ ಹಾಕುತ್ತಾರೆ? ಅವರಿಗೆ ಭಾರತದಲ್ಲಿ ಇರಲು ಭಯವಾಗುತ್ತದೆಂದರೆ ಪಾಕಿಸ್ತಾನಕ್ಕೆ ಹೋಗಲಿ" ಎಂದು ಅವರು ಸಲಹೆ ನೀಡಿದ್ದಾರೆ.

ಸಂಸದೆಯ ಹೆಸರಿನ ಮುಂದೆ ಸಾಧ್ವಿ ಎಂದು ನಮೂದಿಸಿದ್ದನ್ನು ಆಕ್ಷೇಪಿಸಿದ ಅವರು, "ಪ್ರಜ್ಞಾ ಠಾಕೂರ್‌ ಯಾವುದೇ ಅಖಾಡದೊಂದಿಗೆ ಸಂಬಂಧ ಹೊಂದಿಲ್ಲ. ಹಾಗಿರುವಾಗ ಅವರು ಹೆಸರಿನ ಮುಂದೆ ಸಾಧ್ವಿ ಎಂದು ಹಾಕುವುದು ಹೇಗೆ?" ಎಂದು ಪ್ರಶ್ನಿಸಿದರು. "ಅವರಿಗೆ ಭಾರತದಲ್ಲಿರಲು ಭಯವಾಗುತ್ತದೆ ಎಂದಾದರೆ ಅವರು ಪಾಕಿಸ್ತಾನಕ್ಕೆ ಹೋಗಲಿ. ಪ್ರಜ್ಞಾ ಠಾಕೂರ್ ಕೋರ್ಟ್ ಗೆ ಹಾಜರಾಗುವ ಸಮಯ ಬಂದಾಗ ವೀಲ್ ಚೇರ್ ಮೇಲೆ ಬರುತ್ತಾರೆ, ಆದರೆ ಉಳಿದ ಸಮಯದಲ್ಲಿ ಫುಟ್‌ಬಾಲ್ ಆಡುತ್ತಾರೆ" ಎಂದು ಅವರು ಹೇಳಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News