ಪುತ್ತೂರು: ಆನೆಮಜಲಿನಲ್ಲಿ ಉಬ್ಬಿದ ರಸ್ತೆ !

Update: 2022-07-07 14:47 GMT

ಪುತ್ತೂರು: ಮಳೆಗೆ ಬಹುತೇಕ ಕಡೆಗಳಲ್ಲಿ ರಸ್ತೆ ಕುಸಿತ ಉಂಟಾಗುವುದು ಸಾಮಾನ್ಯವಾಗಿದೆ. ಆದರೆ ಪುತ್ತೂರು-ಉಪ್ಪಿನಂಗಡಿ ರಸ್ತೆಯಲ್ಲಿನ ಆನೆಮಜಲು ಎಂಬಲ್ಲಿ ರಸ್ತೆಯು ಮಳೆಗೆ ಉಬ್ಬಿ ಕುತೂಹಲ ಮೂಡಿಸಿದೆ.

ಆನೆಮಜಲು ಎಂಬಲ್ಲಿ ರಸ್ತೆಯ ಭಾಗ ಡಾಂಬರು ಸಹಿತ ಉಬ್ಬಿಕೊಂಡಿದೆ. ರಸ್ತೆಯ ಕೆಳ ಭಾಗದಲ್ಲಿ ನೀರು ಹರಿವು ಹೆಚ್ಚಾಗಿ ಈ ರೀತಿಯಾಗಿ ಉಬ್ಬಿರಬಹುದು ಎಂದು ಅಂದಾಜಿಸಲಾಗಿದೆ.

ಪುತ್ತೂರು-ಉಪ್ಪಿನಂಗಡಿ ದ್ವಿಪಥ ರಸ್ತೆಯು ಕೆಲ ಸಮಯಗಳ ಹಿಂದೆ ನಿರ್ಮಾಣಗೊಂಡಿದ್ದು, ಈ ಭಾಗದಲ್ಲಿ ರಸ್ತೆಯನ್ನು ದುರಸ್ತಿಗೊಳಿಸಿ ಡಾಂಬರೀಕರಣ ಮಾಡಲಾಗಿತ್ತು. ಇದೀಗ ರಸ್ತೆಯ ಭಾಗವು ಉಬ್ಬಿಕೊಂಡಿದೆ. ಅಲ್ಲದೆ ಈ ಭಾಗದಲ್ಲಿ ರಸ್ತೆಯ ಡಾಂಬರು ಎದ್ದು ಹೋಗಿದ್ದು, ಈ ರಸ್ತೆಯಲ್ಲಿ ವಾಹನ ಸಂಚಾರ ನಡೆಸಲು ಭಯ ಪಡುವ ಸ್ಥಿತಿ ನಿರ್ಮಾಣಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News