ಪ್ರಜಾಪ್ರಭುತ್ವ ಉಳಿಸಲು ನನಗೆ ಮತ ನೀಡಿ: ಯಶವಂತ ಸಿನ್ಹಾ

Update: 2022-07-18 05:30 GMT
Photo:PTI

ಹೊಸದಿಲ್ಲಿ: ದೇಶದ ಮುಂದಿನ ರಾಷ್ಟ್ರಪತಿಯಾಗುವ ಸ್ಪರ್ಧೆಯಲ್ಲಿ ಪ್ರಜಾಪ್ರಭುತ್ವ ಉಳಿಸಲು ನನಗೆ ಮತ ನೀಡುವಂತೆ ಎಲ್ಲ ರಾಜಕೀಯ ಪಕ್ಷಗಳಿಗೆ ಪ್ರತಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಯಶವಂತ ಸಿನ್ಹಾ ಅವರು ಸೋಮವಾರ ಮನವಿ ಮಾಡಿದ್ದಾರೆ.

ಯಶವಂತ್ ಸಿನ್ಹಾ ಅವರು ಎನ್‌ಡಿಎ ಅಧ್ಯಕ್ಷೀಯ ಆಯ್ಕೆಯಾಗಿರುವ ದ್ರೌಪದಿ ಮುರ್ಮು ವಿರುದ್ಧ ಕಣಕ್ಕಿಳಿದಿದ್ದಾರೆ.

ಪ್ರಜಾಪ್ರಭುತ್ವವನ್ನು ಉಳಿಸಲು ಎಲ್ಲಾ ಸಂಸದರು ಹಾಗೂ  ಶಾಸಕರು ನನ್ನ ಪರವಾಗಿ ಮತ ಚಲಾಯಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಯಶವಂತ ಸಿನ್ಹಾ ಹೇಳಿದರು.

ಸಂಸದರು ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಚಲಾಯಿಸುವಂತೆ ಮನವಿ ಮಾಡಿದರು.

" ಮತ ರಹಸ್ಯವಾಗಿರುತ್ತದೆ. ಆದರೆ ಯಾವುದೇ ಪಕ್ಷದ ವಿಪ್ ಇರುವುದಿಲ್ಲ. ಹೀಗಾಗಿ  ಯಾರಿಗೆ ಮತ ಹಾಕಬೇಕೆಂದು ನೀವು ನಿರ್ಧರಿಸಬೇಕು" ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News