ಆ. 10ರಂದು ಮಂಗಳೂರು ನಗರದಲ್ಲಿ ಪಕ್ಷಾತೀತ ಪಾದಯಾತ್ರೆ: ಮಾಜಿ ಶಾಸಕ ಜೆ.ಆರ್. ಲೋಬೊ

Update: 2022-08-06 06:40 GMT

ಮಂಗಳೂರು, ಆ.6: ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆ.10ರಂದು ಕಾಂಗ್ರೆಸ್ ನೇತೃತ್ವದಲ್ಲಿ ಮಂಗಳೂರು ನಗರದಲ್ಲಿ ಪಕ್ಷಾತೀತ ಪಾದಯಾತ್ರೆ ಆಯೋಜಿಸಲಾಗಿದೆ ಎಂದು ಮಾಜಿ ಶಾಸಕ ಜೆ.ಆರ್. ಲೋಬೊ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಆ.10ರಂದು ಬೆಳಗ್ಗೆ 9.30ಕ್ಕೆ ಪಾಂಡೇಶ್ವರದ ನೆಹರೂ ಪ್ರತಿಮೆಗೆ ಅರ್ಪಿಸಿ ಅಲ್ಲಿಂದ ಎ.ಬಿ. ಶೆಟ್ಟಿ ಸರ್ಕಲ್, ಕ್ಲಾಕ್ ಟವರ್, ಕೊಡಿಯಾಲ್ ಬೈಲ್, ಪಿವಿಎಸ್, ಬೆಸೆಂಟ್ ಆಗಿ ಲಾಲ್ ಬಾಗ್ ವೃತ್ತಕ್ಕೆ ಆಗಮಿಸಿ ಗಾಂಧಿ ಪ್ರತಿಮೆಗೆ ಹಾರಾರ್ಪಣೆಯೊಂದಿಗೆ ಪಾದಯಾತ್ರೆ ಸಮಾರೋಪಗೊಳ್ಳಲಿದೆ ಎಂದರು.

ದೇಶ ಪರವಾದ ಘೋಷಣೆಯೊಂದಿಗೆ ಶಿಸ್ತಿನ ಪಾದಯಾತ್ರೆ ಇದಾಗಲಿದ್ದು ಇದಕ್ಕಾಗಿ ಪೊಲೀಸರಿಂದ ಅನುಮತಿ ಕೂಡ ಪಡೆಯಲಾಗುವುದು ಎಂದು ಜೆ. ಆರ್. ಲೋಬೊ ತಿಳಿಸಿದರು.

ರಾತ್ರಿ ನಿರ್ಬಂಧ ಮುಂದುವರಿಕೆಗೆ ಮಾಜಿ ಶಾಸಕ ಜೆ.ಆರ್.ಲೋಬೊ ಆಕ್ಷೇಪ

ಗೋಷ್ಠಿಯಲ್ಲಿ ಶಾಹುಲ್ ಹಮೀದ್, ಪ್ರಕಾಶ್ ಸಾಲ್ಯಾನ್, ಅಬ್ದುಲ್ ಸಲೀಂ, ಟಿ.ಕೆ. ಸುಧೀರ್, ಸುನಿಲ್ ಪೂಜಾರಿ, ಹೈದರಾಲಿ, ಪ್ರೇಮನಾಥ್, ರಾಕೇಶ್ ದೇವಾಡಿಗ, ರಿತೇಶ್  ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News