ಅಗ್ನಿಪಥ್ ವಿರುದ್ಧ ನಾಳೆಯಿಂದ ಟಿಕಾಯತ್ ಅಭಿಯಾನ

Update: 2022-08-06 17:14 GMT
Rakesh Tikait (Photo | PTI)

ಹೊಸದಿಲ್ಲಿ,ಆ.6: ಮಿಲಿಟರಿಯಲ್ಲಿ ನೇಮಕಾತಿಗಾಗಿ ಕೇಂದ್ರದ ನೂತನ ಅಗ್ನಿಪಥ್ ಯೋಜನೆಯ ವಿರುದ್ಧ ರಾಕೇಶ್ ಟಿಕಾಯತ್ ನೇತೃತ್ವದ ಭಾರತೀಯ ಕಿಸಾನ ಯೂನಿಯನ್ (ಬಿಕೆಯು) ರವಿವಾರ,ಆ.7ರಿಂದ ಅಭಿಯಾನವನ್ನು ಆರಂಭಿಸಲಿದೆ.

 ಇತ್ತೀಚಿಗೆ ಉತ್ತರ ಪ್ರದೇಶದ ಬಾಘಪತ್ ಜಿಲ್ಲೆಯಲ್ಲಿ ರೈತರ ಸಮಾವೇಶವೊಂದನ್ನು ಉದ್ದೇಶಿಸಿ ಮಾತನಾಡಿದ್ದ ಟಿಕಾಯತ್,ಕೇಂದ್ರ ಮತ್ತು ಉ.ಪ್ರ.ಸರಕಾರಗಳ ವಿರುದ್ಧ ಬಿಕೆಯು ಹೋರಾಡಲಿದೆ. ಆ.7ರಂದು ಅಗ್ನಿಪಥ್ ವಿರುದ್ಧ ಅಭಿಯಾನ ಆರಂಭಗೊಳ್ಳಲಿದೆ ಮತ್ತು ಒಂದು ವಾರ ಮುಂದುವರಿಯಲಿದೆ ಎಂದು ಪ್ರಕಟಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News