ಅಭಿಷೇಕ್‌ ಅಂಬರೀಷ್‌ ಅಭಿನಯದ ನೂತನ ಚಿತ್ರದ ಮೋಷನ್‌ ಪೋಸ್ಟರ್‌ ಬಿಡುಗಡೆ

Update: 2022-08-27 18:06 GMT

 ಬೆಂಗಳೂರು: ಕನ್ನಡ ಚಿತ್ರರಂಗದ ಮಟ್ಟಿಗೆ ಮತ್ತೊಂದು ಬಹು ನಿರೀಕ್ಷಿತ ಚಿತ್ರದ ಸೇರ್ಪಡೆಯಾಗಿದೆ. ಅಂಬರೀಶ್‌ ಪುತ್ರ ಅಭಿಷೇಕ್‌ ಅಂಬರೀಷ್‌ ಅವರ ನಾಲ್ಕನೆ ಚಿತ್ರ AA04 ಮುಹೂರ್ತ ನೆರವೇರಿದೆ. ಹೊಸ ಚಿತ್ರದ ಪೋಸ್ಟರ್‌ ನಲ್ಲಿ ಅಭಿಷೇಕ್‌ ಚಾರಿತ್ರಿಕ ಯೋಧನ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಉಕ್ಕಿನ ಕವಚಗಳನ್ನು ಧರಿಸಿರುವ ಅಭಿಷೇಕ್‌ ಅವರ ಚಿತ್ರವು ಅಭಿಮಾನಿಗಳಲ್ಲಿ ತೀವ್ರ ಕುತೂಹಲವನ್ನು ಹುಟ್ಟಿಸಿದೆ.

ಆಯೋಗ್ಯ ಹಾಗೂ ಮದಗಜ ಚಿತ್ರಕ್ಕೆ ನಿರ್ದೇಶನ ಮಾಡಿದ್ದ ಮಹೇಶ್​ ಕುಮಾರ್ (Mahesh Kumar) ಅವರು ಈ ಚಿತ್ರಕ್ಕೂ ಆಕ್ಷನ್ ಕಟ್​ ಹೇಳಲಿದ್ದಾರೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಶ್​ ಅವರ ಸಮಾಧಿ ಬಳಿ ಅಭಿಷೇಕ್ ಅಂಬರೀಶ್ ಅವರ 4ನೇ ಚಿತ್ರದ ಮುಹೂರ್ತ ನೆರವೇರಿದೆ. ಈ ಚಿತ್ರಕ್ಕೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ (Rockline Venkatesh) ಬಂಡವಾಳ ಹೂಡಿದ್ದಾರೆ.

ಬೆಲ್‌ ಬಾಟಂ, ACT 1978 ಚಿತ್ರಗಳಿಗೆ ಕತೆ ಬರೆದಿರುವ ಕತೆಗಾರ ದಯಾನಂದ್‌ ಟಿಕೆ ಅವರು ಈ ಚಿತ್ರಕ್ಕೂ ಕತೆ ಹಾಗೂ ಸಂಭಾಷಣೆಯನ್ನು ಬರೆದಿದ್ದು, ಚಿತ್ರಕತೆಯನ್ನು ನಿರ್ದೇಶಕ ಮಹೇಶ್‌ ಕುಮಾರ್‌ ಅವರೇ ಬರೆದಿದ್ದಾರೆ.

ದಯಾನಂದ್‌ ಟಿಕೆ ಅವರ ಪ್ರಕಾರ, ಈ ಚಿತ್ರವು ಟಿಕೆ ಅವರ ಮೊದಲ ಹೈ ಬಜೆಟ್‌ ಚಿತ್ರವಾಗಲಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ದಯಾನಂದ್‌, “ಮತ್ತೊಂದು ಹೊಸ ದೇಸಿಮೂಲದ ಕಥೆಯೊಡನೆ ಪಯಣ ಶುರುವಾಗಿದೆ.. ಅಭಿಶೇಕ್ ಅಂಬರೀಶ್ ನಾಯಕರು, ರಾಕ್'ಲೈನ್ ವೆಂಕಟೇಶರ ನಿರ್ಮಾಣದಲ್ಲಿ ಗೆಳೆಯ ಮಹೇಶ್ ಚಿತ್ರಕಥೆ-ನಿರ್ದೇಶನವಿರುವ ಈ ಚಿತ್ರದ ಕಥೆ ಮತ್ತು ಸಂಭಾಷಣೆಯ ಹೊಣೆ ನನ್ನದು. ಇದೇ ಕರ್ನಾಟಕ ನೆಲದಲ್ಲಿ ಒಂದೊಮ್ಮೆ ನಡೆದು ಚರಿತ್ರೆಯ ಅಂಚಿಗೆ ಸರಿಸಲ್ಪಟ್ಟ ಬರ್ಬರ ಘಟನೆಗಳನ್ನು ಆಧರಿಸಿದ ಕಾಲ್ಪನಿಕ ಕಥೆಯಿದು. ನನ್ನ ಮೊದಲ ಹೈಬಡ್ಜೆಟ್ ಚಿತ್ರ. ಪ್ರೀತಿಯಿರಲಿ. The Rebellion Begins..” ಎಂದು ಬರೆದಿದ್ದಾರೆ.

ಆಕ್ಟ್‌ 1978 ಮೂಲಕ ಪರಿಣಾಮಕಾರಿ ಸಂದೇಶವುಳ್ಳ ಚಿತ್ರವನ್ನು ಬರೆದಿರುವ ದಯಾನಂದ್‌ ಟಿಕೆ ಅವರ ʼಚರಿತ್ರೆಯ ಅಂಚಿಗೆ ಸರಿಸಲ್ಪಟ್ಟ ಬರ್ಬರ ಘಟನೆಗಳನ್ನು ಆಧರಿಸಿದ ಕಾಲ್ಪನಿಕ ಕಥೆʼ ಯ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಹುಟ್ಟಿವೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News