×
Ad

ದುಶ್ಚಟ ನಿರ್ಮೂಲನೆಗೆ ಉಲಮಾ ಉಮರಾ ಒಗ್ಗಟ್ಟಾಗಿ ಶ್ರಮಿಸಿ: ಸೈಯದ್ ಜಿಫ್ರಿ ಮುತ್ತುಕೋಯ ತಂಙಳ್ ಕರೆ

Update: 2022-08-30 16:57 IST

ಬಂಟ್ವಾಳ, ಆ.30: ತಮಗೆ ಅರಿವಿಲ್ಲದೆ ದುಶ್ಚಟಗಳ ದಾಸರಾಗಿ ಹಾದಿ ತಪ್ಪುತ್ತಿರುವ ಯುವ ಸಮುದಾಯವನ್ನು ಸರಿದಾರಿಗೆ ತರಲು ಉಲಮಾ, ಉಮರಾಗಳು ಒಗ್ಗಟ್ಟಾಗಿ ಶ್ರಮಿಸಬೇಕು ಎಂದು ಸಮಸ್ತ ಕೇಂದ್ರ ಮುಶಾವರ ಅಧ್ಯಕ್ಷ ಸಯ್ಯದುಲ್ ಉಲಮಾ ಶೈಖುನಾ ಮುಹಮ್ಮದ್ ಜಿಫ್ರಿ ಮುತ್ತು ಕೋಯ ತಂಙಳ್ ಕರೆ ನೀಡಿದ್ದಾರೆ.

ಮಾದಕ ದ್ರವ್ಯಗಳ ಸಹಿತ ಅಕ್ರಮ ಚಟುವಟಿಕೆಗಳ ವಿರುದ್ಧ ಜನಜಾಗೃತಿ ಮೂಡಿಸುವ ಸಲುವಾಗಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕರ್ನಾಟಕ ಮುಶಾವರದ ವತಿಯಿಂದ ತಾಲೂಕಿನ ಜನಪ್ರಿಯ ಗಾರ್ಡನ್ ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 'ಉಲಮಾ ಉಮರಾ ಕಾನ್ಫರೆನ್ಸ್' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಮನುಷ್ಯನನ್ನು ದಾರಿ ತಪ್ಪಿಸುವ ಕೆಲಸ ಆದಿ ಮಾನವನ ಕಾಲದಲ್ಲೇ ನಡೆದಿದ್ದು, ದಾರಿ ತಪ್ಪಿದವರನ್ನು ಸರಿದಾರಿಗೆ ತರುವ ಕೆಲಸ ಅಗತ್ಯವಾಗಿ ಆಗಬೇಕಿದೆ. ಜಾಗೃತಿ, ಅರಿವು, ಸಾದಕ ಬಾಧಕಗಳನ್ನು ಮನವರಿಕೆ ಮಾಡಿಕೊಡುವ ಮೂಲಕ ಯುವ ಸಮೂಹದಲ್ಲಿ ಬದಲಾವಣೆ ಸಾಧ್ಯ. ಈ ನಿಟ್ಟಿನಲ್ಲಿ ಉಲಮಾ ಉಮರಾಗಳು ಶಕ್ತಿ ಮೀರಿ ಕಾರ್ಯಪ್ರವೃತ್ತರಾಗಿ ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕರ್ನಾಟಕ ಮುಶಾವರ ಅಧ್ಯಕ್ಷ ಸೈಯದ್ ಎನ್.ಪಿ.ಎಂ. ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕ ಮಾತನಾಡಿ, ಶಾಲಾ ಕಾಲೇಜಿಗೆ ಹೋಗುವ ತಮ್ಮ ಮಕ್ಕಳ ಮೇಲೆ‌ ಅವರಿಗೆ ಅರಿವಿಲ್ಲದಂತೆ ಪೋಷಕರು ನಿಗಾ ವಹಿಸಬೇಕು. ಅವರ ಬ್ಯಾಗ್ ಗಳನ್ನು ಪರಿಶೀಲಿಸುತ್ತಾ ಇರಬೇಕು. ಪ್ರತಿದಿನ ಶಾಲೆಗೆ ಸರಿಯಾಗಿ ತಲುಪಿದ್ದಾರೊ, ಸರಿಯಾದ ಸಮಯಕ್ಕೆ ಮನೆಗೆ ವಾಪಸ್ ಆಗಿದ್ದಾರೋ ಎಂಬುದನ್ನು ಖಚಿತ ಪಡಿಸಿ. ದುಶ್ಚಟಗಳ ದಾಸರಾಗದಂತೆ ಸರ್ವ ರೀತಿಯಲ್ಲಿ ಜಾಗೃತಿ ವಹಿಸಿ ಮಕ್ಕಳನ್ನು ಬೆಳೆಸಿ ಎಂದು ಹೇಳಿದರು.

ಕೆ.ಎಂ.ಇಬ್ರಾಹೀಂ ಬಾಖವಿ ಕೆ.ಸಿ.ರೋಡ್ ದ್ವಜಾರೋಹಣಗೈದರು. ಅಹ್ಮದ್ ಪೂಕೋಯ ತಂಙಳ್ ದುಆ ನೆರವೇರಿಸಿದರು. ಸಮಸ್ತ ಕರ್ನಾಟಕ ಮುಶಾವರ ಪ್ರಧಾನ ಕಾರ್ಯದರ್ಶಿ ಬಿ.ಕೆ.ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ ಪ್ರಾಸ್ತಾವಿಕ ಭಾಷಣ ಮಾಡಿದರು. ಸೈಯದ್ ಝೈನುಲ್ ಆಬಿದೀನ್ ತಂಙಳ್ ಬೆಳ್ತಂಗಡಿ ಕಾರ್ಯ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.

ರಫೀಬ್ ಝಕರಿಯಾ ಫೈಝಿ ಕೋಝಿಕ್ಕೋಡ್ ವಿಷಯ ಮಂಡನೆ ಮಾಡಿದರು.

ಕಾರ್ಯಕ್ರಮ ಸಂಘಟನೆಯ ಪ್ರಮುಖರಾದ ಕೆ.ಐ.ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ, ಅಬೂಬಕರ್ ಸಿದ್ದೀಕ್ ದಾರಿಮಿ ಕಡಬ, ಕೆ.ಎಲ್.ಉಮರ್ ದಾರಿಮಿ ಪಟ್ಟೋರಿ, ಖಾಸಿಂ ದಾರಿಮಿ ನಂದಾವರ ಉಪಸ್ಥಿತರಿದ್ದರು.

ಕೆ.ಎಂ.ಉಸ್ಮಾನ್ ಫೈಝಿ ತೋಡಾರ್ ಸ್ವಾಗತಿಸಿದರು. ಕೆ.ಪಿ‌.ಎಂ.ಶರೀಫ್ ಫೈಝಿ ಕಡಬ ವಂದಿಸಿದರು.


ಮದ್ರಸ ಶಿಕ್ಷಣದ ವಿರುದ್ಧ ನಿರಂತರವಾಗಿ ನಡೆಯುತ್ತಿರುವ ಅಪಪ್ರಚಾರ ಕೇವಲ ರಾಜಕೀಯ ಪ್ರಚಾರದ ಗಿಮಿಕ್ ಅಷ್ಟೇ. ಮದ್ರಸ ಶಿಕ್ಷಣ ಒಂದು ತೆರೆದ ಪುಸ್ತಕವಾಗಿದೆ. ಅದನ್ನು ಯಾರು ಬೇಕಾದರೂ ಓದಬಹುದು. ಅಧ್ಯಯನ, ಪರಿಶೀಲನೆ ಮಾಡಬಹುದು. ಈ ಸತ್ಯ ಬಹುಪಾಲು ಜನರಿಗೆ ತಿಳಿದಿದೆ. ಭಾರತ ಸರ್ವ ಜನಾಂಗ, ಜಾತಿ, ಧರ್ಮಗಳ ದೇಶವಾಗಿದ್ದು, ಪ್ರತಿಯೊಂದು ಧರ್ಮಗಳ ಜನರಿಂದ ದೇಶದ ಕಲ್ಯಾಣಕ್ಕೆ ಕೊಡುಗೆ ಇದೆ.

- ಜಿಫ್ರಿ ಮುತ್ತುಕೋಯ ತಂಙಳ್,

ಸಮಸ್ತ ಕೇಂದ್ರ ಮುಶಾವರ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News