ದೇವರಿಗೆ ಅರ್ಪಿಸಿದ ಬಾದಾಮಿಗಳನ್ನು ತಿಂದದ್ದಕ್ಕೆ ಬಾಲಕನನ್ನು ಮರಕ್ಕೆ ಕಟ್ಟಿ ಹಾಕಿದ ಅರ್ಚಕ: ವೀಡಿಯೊ ವೈರಲ್‌

Update: 2022-09-11 15:33 GMT

ಸಾಗರ: ಮಧ್ಯಪ್ರದೇಶದಲ್ಲಿ(Madhya Pradesh) 11 ವರ್ಷದ ಬಾಲಕನನ್ನು ದೇವಸ್ಥಾನದ ಅರ್ಚಕ ಸೇರಿದಂತೆ ಇಬ್ಬರು ವ್ಯಕ್ತಿಗಳು ಮರಕ್ಕೆ ಕಟ್ಟಿಹಾಕಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ(Social media) ವೈರಲ್‌ ಆಗಿದೆ. ಘಟನೆಯ ಕುರಿತು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂಡಿಯಾ ಟುಡೇ ಪ್ರಕಾರ, ಜಿಲ್ಲೆಯ ಸಾಗರ ಜಿಲ್ಲೆಯ ಸಿದ್ಧಾಯತನ್ ಜೈನ ದೇವಸ್ಥಾನದಲ್ಲಿ ದೇವರಿಗೆ ಅರ್ಪಿಸಿದ ಕೆಲವು ಬಾದಾಮಿಗಳನ್ನು(Almonds) ಈ ಹುಡುಗ ತೆಗೆದುಕೊಂಡಿದ್ದ ಎಂದು ಆರೋಪಿಸಲಾಗಿದೆ.

ಪ್ರಕರಣದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಬಾಲಕನ ತಂದೆ ನೀಡಿದ ದೂರಿನ ಆಧಾರದ ಮೇಲೆ ಅರ್ಚಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಇಬ್ಬರ ಮೇಲೂ ಐಪಿಸಿ ಮತ್ತು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News