×
Ad

ಸರ್ಕಾರಿ ಸಂಸ್ಥೆಗಳ ದುರುಪಯೋಗ ಮಾಡಿ ಜನರನ್ನು ವಂಚಿಸುತ್ತಿರುವ ಕೇಂದ್ರ ಸರ್ಕಾರ: ಎಪಿಸಿಆರ್ ಆರೋಪ

Update: 2022-09-23 09:21 IST
ಫೈಲ್‌ ಫೋಟೊ 

ಉಡುಪಿ: ಸರ್ಕಾರಿ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು  ಕೋಮುವಾದಿ ಧೋರಣೆಯಿಂದ ಪಕ್ಷಪಾತೀಯ ನಿಲುವು  ತಾಳಿ ಪಿ ಎಫ್ ಐ ಸಂಘಟನೆ ಹಾಗೂ ರಾಜಕೀಯ ಪಕ್ಷವಾಗಿರುವ  ಎಸ್ಡಿಪಿಐ ಯ  ನಾಯಕರುಗಳ ಬಂಧನ ಮಾಡಿ ಈ ದೇಶದ ಸಂವಿಧಾನಕ್ಕೆ  ಅಪಚಾರವೆಸಗುವ ಕೆಲಸವನ್ನು ಇಂದು  ಕೇಂದ್ರ ಸರ್ಕಾರ ಮಾಡುತ್ತಿರುವುದು ಖಂಡನೀಯವಾಗಿದೆ ಎಂದು ಎಪಿಸಿಆರ್ ನ ಉಡುಪಿ ಜಿಲ್ಲಾ ಘಟಕ ತಿಳಿಸಿದೆ.

ಯಾವುದೇ ತನಿಖೆ ನಡೆಸಿ ಸೂಕ್ತ  ಸಾಕ್ಷ್ಯಧಾರ ಇಲ್ಲದೆ ಸುಮ್ಮನೆ ಬಂಧನ ಮಾಡಿರುವುದು ಈ ದೇಶದ ಕಾನೂನು ವ್ಯವಸ್ಥೆಗೆ ಮಾಡಿರುವ ಅಪಚಾರವಾಗಿದೆ. ಇದೇ ರೀತಿ ಮುಂದುವರೆದರೆ ಈ ದೇಶದ ಸಾಂವಿಧಾನಿಕ ಸಂಸ್ಥೆಗಳಿಗೆ ಯಾವುದೇ ರೀತಿಯ ಮೌಲ್ಯವಿಲ್ಲದೆ, ರಾಜಕೀಯದ ಗೂಂಡಾಯಿಸಂನ  ಬಲಿಪಶು ಆಗುವುದರಲ್ಲಿ ಯಾವುದೇ ರೀತಿಯ ಸಂಶಯವಿಲ್ಲದಂತಾಗಲಿದೆ. ಯಾವುದೇ ಸಂಘಟನೆ - ಪಕ್ಷಗಳಾದರೂ ಅದಕ್ಕೆ ತನ್ನದೇ ಆದ ನಿಲುವು ಇದ್ದು ಅದರ ಬಗ್ಗೆ ಭಿನ್ನಾಭಿಪ್ರಾಯಗಳು ಸರ್ವೇ ಸಾಮಾನ್ಯ. ಹಾಗಂತ ಹೇಳಿ ಸಾಂವಿಧಾನಿಕ ಸಂಘಟನಾ ಸ್ವಾತಂತ್ರ್ಯವನ್ನು ಹತ್ತಿಕ್ಕುವುದು ಭಾರತದ ಪ್ರಜಾಪ್ರಭುತ್ವಕ್ಕೆ ಮಾಡುತ್ತಿರುವ ಅಪಮಾನ. ಆದ್ದರಿಂದ ಇಂತಹ ಅರಾಜಕತೆಯನ್ನು ತಕ್ಷಣ ನಿಲ್ಲಿಸಬೇಕೆಂದು ಎಪಿಸಿಆರ್ ನ ಉಡುಪಿ ಜಿಲ್ಲಾ ಘಟಕ ಸಂಚಾಲಕ ಹುಸೇನ್ ಕೋಡಿಬೆಂಗ್ರೆ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News