ವೇಶ್ಯಾವಾಟಿಕೆ, ಮಾದಕ ವಸ್ತು ಸೇವನೆಯ ಅಡ್ಡೆಯಾಗಿದ್ದ ಬಿಜೆಪಿ ಮುಖಂಡ ಪುತ್ರನ ರೆಸಾರ್ಟ್!

Update: 2022-09-27 03:24 GMT

ಡೆಹ್ರಾಡೂನ್: ಅಂಕಿತಾ ಭಂಡಾರಿ ಹತ್ಯೆ ಪ್ರಕರಣದ ತನಿಖೆ ಮುಂದುವರಿದಿರುವ ನಡುವೆಯೇ, ಮುಖ್ಯ ಆರೋಪಿ ಪುಲ್ಕಿತ್ ಆರ್ಯ ಮಾಲಕತ್ವದ ರೆಸಾರ್ಟ್ ವೇಶ್ಯಾವಾಟಿಕೆ ಮತ್ತು ಮಾದಕ ವಸ್ತು ಸೇವನೆಯ ಅಡ್ಡೆಯಾಗಿತ್ತು ಎಂದು ಮಾಜಿ ಉದ್ಯೋಗಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇವರ ತಪ್ಪೊಪ್ಪಿಗೆ ಹೇಳಿಕೆಯನ್ನು ಅಧಿಕೃತವಾಗಿ ಪರಿಗಣಿಸಲಿದೆ ಎಂದು ತನಿಖಾ ತಂಡ ಹೇಳಿದೆ.

ಉಚ್ಚಾಟಿತ ಬಿಜೆಪಿ ಮುಖಂಡ ವಿನೋದ್ ಆರ್ಯಾ ಅವರ ಮಗ, ರೆಸಾರ್ಟ್ ತೊರೆಯಲು ಮುಂದಾಗುವ ಉದ್ಯೋಗಿಗಳಿಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ ಹಾಗೂ ಕಳ್ಳತನ ಹಾಗೂ ಹಲ್ಲೆಯಂಥ ಆರೋಪಗಳಲ್ಲಿ ಸಿಲುಕಿಸುತ್ತಿದ್ದ ಎಂದು ಮಾಜಿ ಸಿಬ್ಬಂದಿ ಹೇಳಿಕೆ ನೀಡಿದ್ದಾರೆ. ಈ ಎಲ್ಲ ಹೇಳಿಕೆಗಳನ್ನು ತನಿಖೆಯ ವೇಳೆ ಪರಿಗಣಿಸಲಾಗುವುದು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಪೌರಿ ಗರ್ವಾಲ್ ಜಿಲ್ಲೆಯ ಗಂಗಾ-ಭೋಗಪುರ ಪ್ರದೇಶದಲ್ಲಿದ್ದ ಈ ರೆಸಾರ್ಟ್‍ನಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆಗಳ ಬಗ್ಗೆ ಇಬ್ಬರು ಮಾಜಿ ಸಿಬ್ಬಂದಿ, ದಂಪತಿ ಮಾಹಿತಿ ನೀಡಿದ್ದಾರೆ. ರೆಸಾರ್ಟ್ ಒಳಗೆ ವೇಶ್ಯಾವಾಟಿಕೆ ಮತ್ತು ಮಾದಕ ವಸ್ತು ಬಳಕೆಯಂಥ ಅಕ್ರಮ ಚಟುವಟಿಕೆಗಳನ್ನು ನಾವು ಸ್ವತಃ ನೋಡಿದ್ದೇವೆ ಎಂದು ಅವರು ಹೇಳಿದ್ದಾರೆ.

ಪೊಲೀಸರಿಗೆ ನೀಡಿರುವ ಹೇಳಿಕೆ ಬಗ್ಗೆ ಮಾಧ್ಯಮ ಜತೆಗೂ ಮಾತನಾಡಿದ ಅವರು, ರೆಸಾರ್ಟ್ ಅಕ್ರಮಗಳಿಗೆ ಸಾಕ್ಷಿಯಾಗಿ ಅವರು ನೀಡಿರುವ ಫೋನ್ ಕರೆಗಳ ತುಣುಕುಗಳು ಇದೀಗ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆರ್ಯ ಹಾಗೂ ಆತನ ಸಹಾಯಕ ಅಂಕಿತ್ ಗುಪ್ತಾ ಎಂಬಾತನ ಕಿರುಕುಳದಿಂದ ನಾವು ತಪ್ಪಿಸಿಕೊಂಡೆವು ಎಂದು ಎರಡು ತಿಂಗಳ ಹಿಂದೆ ಅಲ್ಲಿ ಉದ್ಯೋಗಿಗಳಾಗಿದ್ದ ದಂಪತಿ ಹೇಳಿದ್ದಾರೆ. ಈ ಬಗ್ಗೆ timesofindia.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News