​ಕೃಷಿ ಹೊಂಡಕ್ಕೆ ಬಿದ್ದು ಸಾವು

Update: 2022-10-01 16:27 GMT

ಕಾರ್ಕಳ, ಅ.1: ತಾಲೂಕಿನ ಸೂಡ ಗ್ರಾಮದ ಗಾಣದಬೆಟ್ಟುವಿನ ನಿವಾಸಿ  ಕೂಲಿಕಾರ್ಮಿಕರಾಗಿರುವ ಸುಗುಣ (58) ಶುಕ್ರವಾರ ಮನೆಯ ಪಕ್ಕದ ಸುನಿಲ್ ಎಂಬವರ ಭತ್ತದ ಗದ್ದೆಯಲ್ಲಿ ಭತ್ತದ ಕಳೆ ತೆಗೆಯುವ ಕೆಲಸ ಮಾಡಿ ಮಧ್ಯಾಹ್ನದ ಊಟಕ್ಕೆಂದು ಪಕ್ಕದ ನೀರು ತುಂಬಿದ ಕೃಷಿ ಹೊಂಡದಲ್ಲಿ ಕೈಕಾಲು ತೊಳೆಯುವ ವೇಳೆ ಅಕಸ್ಮಿಕವಾಗಿ ಕೃಷಿಗಾಗಿ ಮಾಡಿದ ಹೊಂಡದ ನೀರಿಗೆ ಬಿದ್ದು ಮುಳುಗಿ ಮೃತಪಟ್ಟಿದ್ದಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News