ಪ್ರತ್ಯೇಕ ಪ್ರಕರಣ: ಇಬ್ಬರು ಆತ್ಮಹತ್ಯೆ

Update: 2022-10-03 16:14 GMT

ಕುಂದಾಪುರ, ಅ.3: ವೀಪರೀತ ಮದ್ಯಪಾನ ಮದ್ಯ ಸೇವನೆ ಚಟ ಹೊಂದಿದ್ದ ಕುಂಭಾಶಿ ಗ್ರಾಮದ ವಿನಾಯಕ ನಗರದ ಮಂಜುನಾಥ(36) ಎಂಬವರು ಅನಾರೋಗ್ಯದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಅ.2ರಂದು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋಟ: ವೈಯಕ್ತಿಕ ಕಾರಣದಿಂದ ಸಾಸ್ತಾನ ಕೋಡಿ ಕನ್ಯಾನದ ಮನನೊಂದ ಕೃಷ್ಣ ಪೂಜಾರಿ ಎಂಬವರ ಪತ್ನಿ ಜಯ (45) ಎಂಬವರು ಅ.3ರಂದು ಮಧ್ಯಾಹ್ನ ಮನೆಯ ರೂಮಿನಲ್ಲಿದ್ದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News