ಜೆಡಿಎಸ್ ಉಡುಪಿ ಜಿಲ್ಲಾ ವಕ್ತಾರರಾಗಿ ವಾಸುದೇವ ರಾವ್
Update: 2022-10-13 21:28 IST
ಉಡುಪಿ, ಅ.13: ಜನತಾದಳ (ಜಾತ್ಯತೀತ) ಪಕ್ಷದ ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ವಿ.ಶೆಟ್ಟಿ ಶಿಫಾರಸ್ಸಿನ ಮೇರೆಗೆ ವಾಸುದೇವ ರಾವ್ ಅವರನ್ನು ಉಡುಪಿ ಜೆಲ್ಲೆಯ ಜೆಡಿಎಸ್ ಪಕ್ಷದ ಜಿಲ್ಲಾ ವಕ್ತಾರರನ್ನಾಗಿ ನೇಮಕಗೊಳಿಸಿ ಕರ್ನಾಟಕ ಪ್ರದೇಶ ಜನತಾದಳ (ಜಾತ್ಯತೀತ) ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಆದೇಶ ಹೊರಡಿಸಿದ್ದಾರೆಂದು ಪ್ರಕಟಣೆ ತಿಳಿಸಿದೆ.