ಡಾ.ಗಣನಾಥ ಎಕ್ಕಾರಿಗೆ ‘ಹಂಸಜ್ಯೋತಿ ಸಮ್ಮಾನ್’ ಪ್ರಶಸ್ತಿ
Update: 2022-10-23 18:02 IST
ಉಡುಪಿ : ಬೆಂಗಳೂರಿನ ಪ್ರತಿಷ್ಠಿತ ಹಂಸಜ್ಯೋತಿ ಟ್ರಸ್ಟ್ ಪ್ರತೀವರ್ಷ ನೀಡುವ ಹಂಸಜ್ಯೋತಿ ಸಮ್ಮಾನ್-2022 ಪ್ರಶಸಿಯನ್ನು ರಾಜ್ಯ ನಿವೃತ್ತ ಎನ್ನೆಸ್ಸೆಸ್ ಅಧಿಕಾರಿ, ವಿದ್ವಾಂಸ ಡಾ.ಗಣನಾಥ ಎಕ್ಕಾರು ಅವರಿಗೆ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಜೀವಮಾನ ಸಾಧನೆಯ ಸೇವೆಯನ್ನು ಪರಿಗಣಿಸಿ ನೀಡಲಾಯಿತು.
ಬೆಂಗಳೂರಿನ ಶೇಷಾದ್ರಿಪುರಂ ಪದವಿ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಹಂಸ ಅಶ್ವಯುಜ ಸಾಂಸ್ಕೃತಿಕ ಸಂಭ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕರ್ನಾಟಕ ಅಬಕಾರಿ ಇಲಾಖೆಯ ಆಯುಕ್ತ ಡಾ.ಬಿ.ಆರ್.ಹಿರೇಮಠ, ಹಾಫ್ ಕಾಮ್ಸ್ ತೋಟಗಾರಿಕಾ ಇಲಾಖೆಯ ನಿರ್ದೇಶಕ ಎಂ.ವಿಜಯ ಕುಮಾರ, ಹಂಸಜ್ಯೋತಿ ಟ್ರಸ್ಟ್ನ ಸಂಸ್ಥಾಪಕ ಮು.ಮುರಳೀಧರ, ಶೇಶಾದ್ರಿಪುರಂ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಜಯರಾಂ, ಸಹಕಾರಿ ಸಚಿವ ಎನ್.ಜಿ. ಸೋಮಶೇಖರ್ ಉಪಸ್ಥಿತರಿದ್ದರು.