ಬೋಟಿನಿಂದ ಬಿದ್ದು ಯುವಕ ಮೃತ್ಯು

Update: 2022-10-28 17:26 GMT

ಗಂಗೊಳ್ಳಿ, ಅ.28: ಮೀನುಗಾರಿಕಾ ಬೋಟಿನಿಂದ ನೀರಿಗೆ ಬಿದ್ದು ಕಾರ್ಮಿಕ ರೊಬ್ಬರು ಮೃತಪಟ್ಟ ಘಟನೆ ನಡೆದಿದೆ.

ಮೃತರನ್ನು ಗುಜ್ಜಾಡಿ ಗ್ರಾಮದ ಅವಡಿಬೈಲು ನಿವಾಸಿ ರಘುವೀರ್ ತಾಂಡೇಲ (28) ಎಂದು ಗುರುತಿಸಲಾಗಿದೆ. ಇವರು ಅ.೨೬ರಂದು ರಾತ್ರಿ ಗಂಗೊಳ್ಳಿ ಮ್ಯಾಂಗನೀಸ್ ರಸ್ತೆಯ ಬಳಿಯ ಜಟ್ಟಿಯಿಂದ ಬೋಟಿನಲ್ಲಿ ಮೀನುಗಾರಿಕೆಗೆ ಹೊರಟಿದ್ದು, ಈ ವೇಳೆ ಬೋಟಿನಿಂದ ಅಕಸ್ಮಿಕವಾಗಿ ಪಂಚಗಂಗಾವಳಿ ನದಿಯ ನೀರಿಗೆ  ಬಿದ್ದು ನಾಪತ್ತೆಯಾಗಿದ್ದರು. ಅ.27ರಂದು ಸಂಜೆ ವೇಳೆ ಇವರ ಮೃತದೇಹವು ನದಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Similar News