ಟೆಂಪೋಗೆ ಲಾರಿ ಢಿಕ್ಕಿ: ಕ್ಲೀನರ್ ಮೃತ್ಯು

Update: 2022-11-01 14:37 GMT

ಶಂಕರನಾರಾಯಣ : ಲಾರಿಯೊಂದು 407 ಟೆಂಪೊಗೆ ಢಿಕ್ಕಿ ಹೊಡೆದ ಪರಿಣಾಮ ಟೆಂಪೋ ಕ್ಲಿನರ್ ಮೃತಪಟ್ಟ ಘಟನೆ ಸಿದ್ದಾಪುರ ಗ್ರಾಮದ ಹೆಗ್ಗೇರಿ ಕ್ರಾಸ್ ಎಂಬಲ್ಲಿ ಅ.31ರಂದು ಸಂಜೆ ವೇಳೆ ನಡೆದಿದೆ.

ಮೃತರನ್ನು ಶಿವ ಭಾದು ಷಾ ಎಂದು ಗುರುತಿಸಲಾಗಿದೆ. ಟೈಲ್ ಮತ್ತು ಗ್ರಾನೇಟ್ ಸಾಗಿಸುತ್ತಿದ್ದ 407 ಟೆಂಪೋಗೆ ಹಿಂದಿನಿಂದ ಬಂದ ಲಾರಿ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಟೆಂಪೋ ಹಿಂಬದಿ ಟೈಲ್ ಮತ್ತು ಗ್ರಾನೇಟ್ ನೊಂದಿಗೆ ಕುಳಿತಿದ್ದ ಶಿವ ಭಾದು ಷಾ ಗಂಭೀರವಾಗಿ ಗಾಯಗೊಂಡ ರೆಂದು ತಿಳಿದುಬಂದಿದೆ. ಗಂಭೀರ ಸ್ಥಿತಿಯಲ್ಲಿದ್ದ ಶಿವ ಕುಂದಾಪುರ ಸರಕಾರಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು  ಲಾರಿ ಚಾಲಕ  ಲಾರಿಯನ್ನು  ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದಾನೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News