ಕಾಂತಾರಕ್ಕೆ ಮತ್ತೆ ಸಂಕಷ್ಟ: ವರಾಹರೂಪಂ ಹಾಡಿಗೆ ಕೇರಳದ ಮತ್ತೊಂದು ನ್ಯಾಯಾಲಯದಿಂದ ತಡೆಯಾಜ್ಞೆ

Update: 2022-11-02 17:22 GMT

ತಿರುವನಂತಪುರ: ಕೇರಳದ ಮತ್ತೊಂದು ನ್ಯಾಯಾಲಯವು "ಕಾಂತಾರ" ಚಿತ್ರದಲ್ಲಿ "ವರಾಹ ರೂಪಂ" ಹಾಡನ್ನು ಬಳಸದಂತೆ ಮಾಡದಂತೆ ತಡೆಯಾಜ್ಞೆ ನೀಡಿದೆ ಎಂದು livelaw.com ವರದಿ ಮಾಡಿದೆ. 

ಈ ಬಾರಿ, ಪಾಲಕ್ಕಾಡ್ ಜಿಲ್ಲಾ ನ್ಯಾಯಾಲಯವು "ನವರಸಂ" ಹಾಡಿನ ಮೇಲೆ ಹಕ್ಕುಸ್ವಾಮ್ಯವನ್ನು ಹೊಂದಿರುವ ಸಂಸ್ಥೆ ಸಲ್ಲಿಸಿದ ಹಕ್ಕುಸ್ವಾಮ್ಯ ಉಲ್ಲಂಘನೆಯ ಮೊಕದ್ದಮೆಗೆ ತಡೆಯಾಜ್ಞೆ ನೀಡಿದೆ.

"ಕಾಂತಾರ" ನಿರ್ಮಾಪಕರು "ವರಾಹ ರೂಪಂ" ಹಾಡನ್ನು ಚಿತ್ರಮಂದಿರಗಳಲ್ಲಿ ಮತ್ತು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಬಳಸದಂತೆ ಕೇರಳದ ನ್ಯಾಯಾಲಯವು ತಾತ್ಕಾಲಿಕ ತಡೆಯಾಜ್ಞೆ ನೀಡಿತ್ತು.

 "ವರಾಹ ರೂಪಂ" ಅನ್ನು ಅದರ "ನವರಸಂ" ಹಾಡಿನಿಂದ ಕೃತಿಚೌರ್ಯ ಮಾಡಲಾಗಿದೆ ಎಂದು ಆರೋಪಿಸಿ ಕೇರಳ ಮೂಲದ ರಾಕ್ ಮ್ಯೂಸಿಕ್ ಬ್ಯಾಂಡ್ "ತೈಕ್ಕುಡಮ್ ಬ್ರಿಡ್ಜ್" (Thaikkudam Bridge) ಸಲ್ಲಿಸಿದ ಮೊಕದ್ದಮೆಯಲ್ಲಿ ಕೋಝಿಕೋಡ್‌ನಲ್ಲಿರುವ ಪ್ರಧಾನ ಜಿಲ್ಲಾ ನ್ಯಾಯಾಲಯವು ಮಧ್ಯಂತರ ಆದೇಶವನ್ನು ನೀಡಿತ್ತು.

Similar News