ದಿಲ್ಲಿ ಅಬಕಾರಿ ನೀತಿ ಹಗರಣ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ವಿಜಯ್ ನಾಯರ್, ಅಭಿಷೇಕ್ ಬೊಯಿನಪಳ್ಳಿ ಬಂಧನ

Update: 2022-11-14 16:28 GMT

ಹೊಸದಿಲ್ಲಿ, ನ. 14: ದಿಲ್ಲಿ ಅಬಕಾರಿ ನೀತಿ (ಈಗ ರದ್ದುಗೊಳಿಸಲಾಗಿದೆ)ಯಲ್ಲಿನ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಆಮ್ ಆದ್ಮಿ(Aam Aadmi) ಪಕ್ಷದ ಸಂವಹನ ಉಸ್ತುವಾರಿ ವಿಜಯ ನಾಯರ್(Vijay Nair) ಹಾಗೂ ಉದ್ಯಮಿ ಅಭಿಷೇಕ್ ಬೊಯಿನಪಳ್ಳಿ (Abhishek Boyinapally)ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. ನ್ಯಾಯಾಲಯ ವಿಚಾರಣೆಗೆ ಇಬ್ಬರನ್ನು ಐದು ದಿನಗಳ ಕಾಲ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ನೀಡಿದೆ.

ಪ್ರಸಕ್ತ ಇಬ್ಬರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದೇ ಪ್ರಕರಣದಲ್ಲಿ ಸಿಬಿಐ ಬಂಧಿಸಿದ ಬಳಿಕ ಅವರನ್ನು ಜೈಲಿನಲ್ಲಿ ಇರಿಸಲಾಗಿತ್ತು. ಸಿಬಿಐ ಕಳೆದ ವಾರ ಬಂಧಿಸಿದ ಇತರ ಆರೋಪಿಗಳಾದ ಪಿ. ಶರತ್ ಸಿ. ರೆಡ್ಡಿ ಹಾಗೂ ಬಿನೋಯ್ ಬಾಬು ಅವರನ್ನು ನಾಯರ್, ಬೊಯಿನಪಳ್ಳಿ ಎದುರು ನಿಲ್ಲಿಸಲಾಯಿತು. ಎಲ್ಲ ಆರೋಪಿಗಳನ್ನು ಪ್ರತಿಯೊಬ್ಬರ ಉಪಸ್ಥಿತಿಯಲ್ಲಿ ವಿಚಾರಣೆ ನಡೆಸಲಾಯಿತು ಎಂದು ಮೂಲಗಳು ತಿಳಿಸಿವೆ.

Similar News