ಅಂದರ್‌ ಬಾಹರ್ ಆರೋಪ : ಮೂವರ ಬಂಧನ

Update: 2022-11-14 16:28 GMT

ಕಾರ್ಕಳ, ನ.14: ಕುಕ್ಕುಂದೂರು ಗ್ರಾಮದ ಅಯ್ಯಪ್ಪ ನಗರಪಾದೆ ಬಳಿ ಹಾಡಿಯಲ್ಲಿ ನ.13 ರಂದು ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ ಮೂವರನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ.

ಕುಕ್ಕುಂದೂರು ನಿಜ ಮುಂಡೆ ನಿವಾಸಿ ಉಮೇಶ(32), ಶಾಂತಿಪಲ್ಕೆಯ ಸುರೇಶ(24), ಶಂಕರಬೆಟ್ಟುವಿನ ಪ್ರಜ್ವಲ್ (25) ಬಂಧಿತ ಆರೋಪಿಗಳು.

ಉಳಿದ 4 ಮಂದಿ ಸ್ಥಳದಿಂದ ಓಡಿ ಹೋಗಿದ್ದಾರೆ. ಬಂಧಿತರಿಂದ 3600ರೂ. ನಗದು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News