ಕಾರ್ಕಳ: ವೃದ್ಧ ಆತ್ಮಹತ್ಯೆ

Update: 2022-11-17 16:12 GMT

ಕಾರ್ಕಳ, ನ.17: ಹಾಸನದಲ್ಲಿ ಮಕ್ಕಳೊಂದಿಗೆ ವಾಸವಾಗಿದ್ದ ರಾಮ ಪೂಜಾರಿ (64) ಎಂಬವರು ಕುಕ್ಕುಂದೂರು ಗ್ರಾಮದ ದುರ್ಗಾನಗರ ಎಂಬಲ್ಲಿರುವ ತನ್ನ ತೋಟವನ್ನು ನೋಡಿಕೊಂಡು ಹೋಗಲು ನ.14ರಂದು ಮನೆಗೆ ಬಂದವರು ಯಾವುದೋ ಕಾರಣದಿಂದ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ನ.15ರಂದು ಬೆಳಗ್ಗೆ 7:30ರಿಂದ 16ರ ರಾತ್ರಿ 11 ಗಂಟೆ ನಡುವಿನ ಅವಧಿಯಲ್ಲಿ ತನ್ನ ಮನೆ ಪಕ್ಕದಲ್ಲಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಮಗಳು ಮಂಜುಶ್ರೀ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತಿದ್ದಾರೆ.

Similar News