ಉಡುಪಿ: ನ.26ರಂದು ಜಯಂಟ್ಸ್ ಫೆಡರೇಶನ್ ಮಟ್ಟದ ಪ್ರಶಸ್ತಿ ಪ್ರದಾನ

Update: 2022-11-25 06:56 GMT

ಉಡುಪಿ, ನ.25: ಜಯಂಟ್ಸ್ ವೆಲ್ಫೇರ್ ಪೌಂಡೇಶನ್ ವತಿಯಿಂದ ಉಡುಪಿ ಜಯಂಟ್ಸ್ ಗ್ರೂಪ್ ಆತಿಥ್ಯದಲ್ಲಿ ಜಯಂಟ್ಸ್ ಫೆಡರೇಶನ್ ಮಟ್ಟದ ಪ್ರಶಸ್ತಿ 2022-23 ಮತ್ತು ಮಾಜಿ ಅಧ್ಯಕ್ಷರುಗಳ ಸಮ್ಮಿಲನ ಕಾರ್ಯಕ್ರಮವನ್ನು ನ.26ರಂದು ಸಂಜೆ 6ಗಂಟೆಗೆ ಉಡುಪಿಯ ಪಂಚರತ್ನ ಹೊಟೇಲ್ ಸಭಾಂಗಣ ದಲ್ಲಿ ಆಯೋಜಿಸಲಾಗಿದೆ.

ಮುಖ್ಯ ಅತಿಥಿಗಳಾಗಿ ಉಡುಪಿ ಶಾಸಕ ಕೆ.ರಘುಪತಿ ಭಟ್, ಜಯಂಟ್ಸ್ ವೆಲ್ಫೇರ್ ಫೌಂಡೇಶನ್‌ನ ಡೆಪ್ಯುಟಿ ವರ್ಲ್ಡ್ ಚೇಯರ್‌ಮೆನ್ ಎಂ.ಲಕ್ಷ್ಮಣನ್ ಭಾಗವಹಿಸಲಿರುವರು. ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಫೌಂಡೇಶನ್ ಸೆಂಟ್ರಲ್ ಕಮಿಟಿ ಸದಸ್ಯ ದಿನಕರ್ ಕೆ.ಅಮೀನ್, ವೆಲ್ಫೇರ್ ಫೌಂಡೇಶನ್ ಅಧ್ಯಕ್ಷ ತಾರದೇವಿ ವಾಲಿ ಗೌರವ ಉಪಸ್ಥಿತಲಿರುವರು.

ಡಾ.ಮದುಸೂಧನ್ ನಾಯಕ್(ಮೆಡಿಸಿನ್), ಸುಧೀರ್‌ರಾಜ್ ಕೆ.(ಶಿಕ್ಷಣ), ಸಿರಾಜ್ ಅಹ್ಮದ್(ಸಮಾಜ ಸೇವೆ), ಮಲೇಶಪ್ಪ ಬಿಸಿರೊಟ್ಟಿ(ಕೃಷಿ), ಮಹೇಶ್ ಜಾದವ್(ಮಾನವೀಯ ಸೇವೆ), ಮೋಹನ ಮಯಿಪಡ್ಡಿ(ಜೋತಿಷ್ಯ), ಸಂಪಕ್ ಕುಮಾರ್ ಪಾಂಗಾಳ(ಕಲೆ), ಆಚಾರ್ಯ ಜಗದೀಶ್ ಶಿವಪುರ(ಸಂಗೀತ) ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಜಯಂಟ್ಸ್ ಉಡುಪಿ ಅಧ್ಯಕ್ಷ ಎಂ.ಇಕ್ಬಾಲ್ ಮನ್ನಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Similar News