ಮಹಾರಾಷ್ಟ್ರ: ಪಾದಚಾರಿ ಮೇಲ್ಸೇತುವೆ ಕುಸಿತ; ಕೆಲವರಿಗೆ ಗಾಯ

Update: 2022-11-27 18:20 GMT

ಮುಂಬೈ, ನ. 27: ಮಹಾರಾಷ್ಟ್ರದ ಚಂದ್ರಾಪುರದಲ್ಲಿ ರವಿವಾರ ಪಾದಚಾರಿ ಮೇಲ್ಸೇತುವೆಯ ಚಪ್ಪಡಿ ಕುಸಿದು ನಾಲ್ವರು ಗಾಯಗೊಂಡಿದ್ದಾರೆ. ನಗರದ  ಬಲ್ಲಾರ್ ಶಾಹ್ ರೈಲ್ವೆ ನಿಲ್ದಾಣದಲ್ಲಿ ಸಂಜೆ 5 ಗಂಟೆಗೆ ಈ ಘಟನೆ ನಡೆದಿದೆ. 

‘‘ಪುಣೆಗೆ ತೆರಳುವ ರೈಲು ಹತ್ತಲು ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಈ ಪಾದಚಾರಿ ಮೇಲ್ಸೇತುವೆಯಲ್ಲಿ ಸಂಚರಿಸುತ್ತಿರುವ ಸಂದರ್ಭ ಇದರ ಒಂದು ಭಾಗ ಹಠಾತ್ ಕುಸಿದಿದೆ. ಪರಿಣಾಮ ಕೆಲವರು 20 ಅಡಿ ಕೆಳಗಿರುವ ರೈಲು ಹಳಿಯ ಮೇಲೆ ಬಿದ್ದರು ಹಾಗೂ ಗಾಯಗೊಂಡರು’’ ಎಂದು ಸರಕಾರಿ ರೈಲ್ವೆ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

‘‘ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಎಲ್ಲರನ್ನು ನಾಗರಿಕ ಆಸ್ಪತ್ರೆಗೆ ವರ್ಗಾಯಿಸಲಾಗಿದೆ’’ ಎಂದು ರೈಲ್ವೆ ವಕ್ತಾರ ಶಿವಾಜಿ ಸುತಾರ್ ಅವರು ತಿಳಿಸಿದ್ದಾರೆ. 
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡವರಿಗೆ ತಲಾ 1 ಲಕ್ಷ ರೂ. ಹಾಗೂ ಅಲ್ಪಸ್ವಲ್ಪ ಗಾಯಗೊಂಡವರಿಗೆ 50 ಸಾವಿರ ರೂ.ವನ್ನು ರೈಲ್ವೆ ಘೋಷಿಸಿದೆ.

Similar News