ಸುನಂದಾ ಪುಷ್ಕರ್ ಸಾವಿನ ಪ್ರಕರಣ: ಶಶಿ ತರೂರ್ ವಿರುದ್ಧ ಹೈಕೋರ್ಟ್ ಮೊರೆ ಹೋದ ದಿಲ್ಲಿ ಪೊಲೀಸರು

Update: 2022-12-01 08:35 GMT

ಹೊಸದಿಲ್ಲಿ: ಕಾಂಗ್ರೆಸ್ ನಾಯಕ ಶಶಿ ತರೂರ್ ಅವರನ್ನು ಅವರ ಪತ್ನಿ ಸುನಂದಾ ಪುಷ್ಕರ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಡುಗಡೆಗೊಳಿಸಿದ ವಿಚಾರಣಾ ನ್ಯಾಯಾಲಯದ 2021 ರ ಆದೇಶವನ್ನು ಪ್ರಶ್ನಿಸಿ ನಗರ ಪೊಲೀಸರು ಗುರುವಾರ ದಿಲ್ಲಿ ಹೈಕೋರ್ಟ್‌ಗೆ ಮೊರೆ ಹೋಗಿದ್ದಾರೆ.

ನ್ಯಾಯಮೂರ್ತಿ ಡಿ.ಕೆ. ಶರ್ಮಾ ಅವರು ಅರ್ಜಿಯ ಪ್ರತಿಯನ್ನು ತರೂರ್ ಅವರ ವಕೀಲರಿಗೆ ಪೂರೈಸುವಂತೆ ದಿಲ್ಲಿ ಪೊಲೀಸರ ವಕೀಲರಿಗೆ ತಿಳಿಸಿದರು.

ವಿಚಾರಣಾ ನ್ಯಾಯಾಲಯದ ಆಗಸ್ಟ್ 18, 2021 ರ ಆದೇಶದ ವಿರುದ್ಧ ಪರಿಷ್ಕರಣೆ ಅರ್ಜಿಯನ್ನು ಸಲ್ಲಿಸುವಲ್ಲಿ ವಿಳಂಬವನ್ನು ಕ್ಷಮಿಸುವಂತೆ ಕೋರಿ ಪೊಲೀಸರು ಸಲ್ಲಿಸಿದ ಅರ್ಜಿಯ ಮೇಲೆ ಹೈಕೋರ್ಟ್ ನೋಟೀಸ್ ನೀಡಿತು ಹಾಗೂ  ತರೂರ್ ಅವರ ಪ್ರತಿಕ್ರಿಯೆಯನ್ನು ಕೋರಿತು.

ಪ್ರಕರಣಕ್ಕೆ ಸಂಬಂಧಿಸಿದ ಪ್ರತಿಗಳು ಹಾಗೂ  ದಾಖಲೆಗಳನ್ನು ಕಕ್ಷಿದಾರರನ್ನು ಹೊರತುಪಡಿಸಿ ಬೇರೆ ಯಾವುದೇ ವ್ಯಕ್ತಿಗೆ ಸರಬರಾಜು ಮಾಡಬಾರದು ಎಂದು ನಿರ್ದೇಶಿಸಿದೆ.

ಹೈಕೋರ್ಟ್ ಈ ವಿಷಯವನ್ನು ಫೆಬ್ರವರಿ 7, 2023 ರಂದು ವಿಚಾರಣೆಗೆ ಪಟ್ಟಿ ಮಾಡಿದೆ.

Similar News