ತೂಗುಸೇತುವೆ ದುರಂತಕ್ಕೆ ಸಾಕ್ಷಿಯಾದ ಮೊರ್ಬಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನ್ನಡೆ
Update: 2022-12-08 04:36 GMT
ಅಹ್ಮದಾಬಾದ್: ಇತ್ತೀಚೆಗೆ 135 ಮಂದಿಯ ಪ್ರಾಣ ಬಲಿ ಪಡೆದ ತೂಗು ಸೇತುವೆ ಕುಸಿತ ಘಟನೆ ನಡೆದ ಗುಜರಾತ್ (Gujarat) ರಾಜ್ಯದ ಮೊರ್ಬಿ (Morbi) ವಿಧಾನಸಭಾ ಕ್ಷೇತ್ರದ ಮತ ಎಣಿಕೆಯ ಆರಂಭಿಕ ಹಂತದಲ್ಲಿ ಬಿಜೆಪಿಯ (BJP) ಅಭ್ಯರ್ಥಿ ಕಾಂತಿಲಾಲ್ ಅಮೃತಿಯಾ ಅವರು ಮುನ್ನಡೆ ಸಾಧಿಸಿದ್ದಾರೆ.
ಈ ಕ್ಷೇತ್ರದ ಹಾಲಿ ಸದಸ್ಯ, ಬಿಜೆಪಿ ನಾಯಕ ಬೃಜೇಶ್ ಮಿಶ್ರಾ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿ ಮಾಜಿ ಶಾಸಕರಾಗಿದ್ದ ಅಮೃತಿಯಾ ಅವರನ್ನು ಕಣಕ್ಕಿಳಿಸಿತ್ತು. ಮೊರ್ಬಿ ಸೇತುವೆ ದುರಂತ ನಡೆದ ಸಂದರ್ಭ ಸಹಾಯಹಸ್ತ ಚಾಚಿ ಹಲವರನ್ನು ಉಳಿಸಿದ್ದಕ್ಕಾಗಿ ಅಮೃತಿಯಾ ಅವರಿಗೆ ಬಿಜೆಪಿ ಟಿಕೆಟ್ ನೀಡಿತ್ತು ಎಂದು ಹೇಳಲಾಗುತ್ತಿದೆ. ನೀರಿನಲ್ಲಿ ಬಿದ್ದಿದ್ದ ಹಲವರನ್ನು ಅಮೃತಿಯಾ ರಕ್ಷಿಸುತ್ತಿರುವ ವೀಡಿಯೋ ಕೂಡ ಬಹಳಷ್ಟು ಸುದ್ದಿಯಾಗಿತ್ತು.
ಮೊದಲ ಹಂತದ ಚುನಾವಣೆಯಲ್ಲಿ ಮತದಾನ ನಡೆದಿದ್ದ ಮೊರ್ಬಿಯಲ್ಲಿ ಶೇ 62 ರಷ್ಟು ಮತದಾನ ದಾಖಲಾಗಿತ್ತು.