ಪ್ರಧಾನಿ ಮೋದಿ ವಿರುದ್ಧ ನಕಲಿ ದಾಖಲೆ ಬಳಕೆ ಆರೋಪ: ಎರಡನೇ ಬಾರಿ ಜಾಮೀನು ಪಡೆದ ಸಾಕೇತ್ ಗೋಖಲೆ
Update: 2022-12-09 15:45 GMT
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ನಕಲಿ ದಾಖಲೆಯನ್ನು ಟ್ವೀಟ್ ಮಾಡಿದ ಆರೋಪದ ಮೇಲೆ ಎರಡನೇ ಬಾರಿಗೆ ಬಂಧಿಸಲ್ಪಟ್ಟ ತೃಣಮೂಲ ಕಾಂಗ್ರೆಸ್ ವಕ್ತಾರ ಸಾಕೇತ್ ಗೋಖಲೆ ಮತ್ತೊಮ್ಮೆ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಟಿಎಂಸಿ (TMC) ಶುಕ್ರವಾರ ತಿಳಿಸಿದೆ.
ಗುರುವಾರ, ಅವರು ಮೆಟ್ರೋಪಾಲಿಟನ್ ನ್ಯಾಯಾಲಯದಿಂದ ಜಾಮೀನು ಪಡೆದ ಕೆಲವೇ ಗಂಟೆಗಳ ನಂತರ, ಗುಜರಾತ್ ಪೊಲೀಸರು ಗೋಖಲೆ ಅವರನ್ನು ಮತ್ತೊಮ್ಮೆ ಬಂಧಿಸಿದ್ದರು.
ನಾಟಕೀಯ ಬೆಳವಣಿಗೆಯ ನಂತರ ಮೂರು ಸದಸ್ಯರ ನಿಯೋಗವನ್ನು ಮೊರ್ಬಿಗೆ ಕಳುಹಿಸಲಾಗಿದೆ ಎಂದು ಪಕ್ಷ ಹೇಳಿದೆ.
ಮೊರ್ಬಿ ಸೇತುವೆ ಕುಸಿತದ ನಂತರ ಪ್ರಧಾನಿ ಮೋದಿಯವರ ಭೇಟಿಗೆ ₹ 30 ಕೋಟಿ ವೆಚ್ಚವಾಗಿದೆ ಎಂದು ಗೋಖಲೆ ಹೇಳಿದ್ದರು.