ಉಡುಪಿ: ಪ್ರತ್ಯೇಕ ಪ್ರಕರಣ; ನಾಲ್ವರು ಆತ್ಮಹತ್ಯೆ

Update: 2022-12-14 15:54 GMT

ಉಡುಪಿ, ಡಿ.14: ಅನಾರೋಗ್ಯದಿಂದ ಬಳಲುತ್ತಿದ್ದ ಕುಂಜಿಬೆಟ್ಟು ರಾಮಮಂದಿರ ನಿವಾಸಿ  ಗುರುವಪ್ಪ ಎಂಬವರ ಪತ್ನಿ ಮಂಜುಳ (50) ಜೀವನದಲ್ಲಿ ಜಿಗುಪ್ಸೆಗೊಂಡು, ಡಿ.14ರಂದು ಬೆಳಗಿನ ಜಾವ ನೆರೆಮನೆಯ ಬಾವಿಯ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಂಕರನಾರಾಯಣ: ಸಂಬಳದ ಹಣ ಕಳೆದು ಹೋದ ಚಿಂತೆಯಲ್ಲಿ ಮುಳ್ಳುಗುಡ್ಡೆಯ ಸೌಪರ್ಣಿಕ ಕಾರ್ಖಾನೆಯ ಕಾರ್ಮಿಕ, ಅಂಪಾರು ಗ್ರಾಮದ ಬಲಾಡಿ ಚಾತ್ರುಟಿ ನಿವಾಸಿ ಸುರೇಶ (42) ಎಂಬವರು ಡಿ.13ರಂದು ರಾತ್ರಿ ವೇಳೆ ಮನೆಯ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಲಾಗಿದೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಕಳ: ಸಾಲ ಮರುಪಾವತಿಸಲು ಸಾಧ್ಯವಾಗದ ಚಿಂತೆಯಲ್ಲಿ ಮನನೊಂದ ತೆಳ್ಳಾರು ದೆಯಲ್‌ಬೆಟ್ಟು ನಿವಾಸಿ ಭೋಜ ಮೂಲ್ಯ ಎಂಬವರ ಮಗ ದಯಾನಂದ ಮೂಲ್ಯ(34) ಎಂಬವರು ಡಿ.14ರಂದು ಬೆಳಗ್ಗೆ ಮನೆಯ ಬಳಿಯ ದೊಡ್ಡಪ್ಪನ ಮಗನ ಮನೆಯ ಒಳಗೆ ಕೊಠಡಿಯಲ್ಲಿ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಲ್ಪೆ: ಮಲ್ಪೆ ಕೊಳ ಹನುಮಾನ ವಿಠೋಭ ಭಜನಾ ಸಮೀಪದಲ್ಲಿರುವ ತನ್ನ ಅಂಗಡಿಯಲ್ಲಿ ವ್ಯಾಪಾರ ಇಲ್ಲದೆ ಆರ್ಥಿಕ ಅಡಚಣೆಯಿಂದ ಮನನೊಂದ ಗದಗ ಮೂಲದ ಜಯಪ್ರಕಾಶ್(24) ಎಂಬವರು ಡಿ.13ರಂದು ರಾತ್ರಿ ರೂಮಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಲಾಗಿದೆ.

ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News