‘‘ಕುಡಿದಿದ್ದೀರಾ?’’ ಎಂದು ಬಿಜೆಪಿ ಶಾಸಕರನ್ನು ಪ್ರಶ್ನಿಸಿದ ಬಿಹಾರ ಮುಖ್ಯಮಂತ್ರಿ

Update: 2022-12-14 17:27 GMT

ಪಾಟ್ನಾ (ಬಿಹಾರ), ಡಿ. 14: ಶರಾಬು ಸೇವನೆಯಿಂದ ಸಂಭವಿಸಿರುವ ಸಾವುಗಳ ಬಗ್ಗೆ ಬಿಹಾರ ವಿಧಾನಸಭೆಯಲ್ಲಿ ಬುಧವಾರ ಪ್ರತಿಪಕ್ಷ ನಡೆಸಿದ ಪ್ರತಿಭಟನೆಯ ವೇಳೆ ಆಕ್ರೋಶಗೊಂಡ ಮುಖ್ಯಮಂತ್ರಿ ನಿತೀಶ್ ಕುಮಾರ್(Nitish Kumar), ‘‘ನೀವುಕುಡಿದಿದೀರಾ?’’ ಎಂಬುದಾಗಿ ಬಿಜೆಪಿ ಶಾಸಕರನ್ನು ಉದ್ದೇಶಿಸಿಹೇಳಿದರು.

ಬಿಹಾರದಲ್ಲಿ 2016ರಿಂದ ಪಾನ ನಿಷೇಧಜಾರಿಯಲ್ಲಿದೆ. ಸರನ್ ಜಿಲ್ಲೆಯ ಛಪ್ರದಲ್ಲಿ ವಿಷಪೂರಿತ ಶರಾಬು ಸೇವಿಸಿ 17 ಮಂದಿ ಮೃತಪಟ್ಟಿದ್ದಾರೆ ಹಾಗೂ ಸಾವಿನ ಸಂಖ್ಯೆಇನ್ನೂ ಹೆಚ್ಚುವಸಾಧ್ಯತೆಯಿದೆ.

‘‘ನಿಮಗೆ ಏನಾಗಿದೆ? ಸುಮ್ಮನಿರಿ. ಅವರನ್ನು ಸದನ ದಿಂದ ಹೊರಗೆಕಳುಹಿಸಿ’’ ಎಂಬುದಾಗಿ ನಿತೀಶ್ ಕುಮಾರ್ ಹೇಳುವುದು ವೀಡಿಯೊವೊಂದರಲ್ಲಿ ಕೇಳುತ್ತದೆ. ಬಿಜೆಪಿ ಶಾಸಕರು ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದಾಗ ಮುಖ್ಯಮಂತ್ರಿ ಈ ಪ್ರತಿಕ್ರಿಯೆ ನೀಡಿದ್ದಾರೆ.

"ನೀವುಕುಡಿದಿದ್ದೀರಾ?" ಎಂಬುದಾಗಿ ನಿತೀಶ್ ಕುಮಾರ್ ಆಕ್ರೋಶಿತರಾಗಿ ನುಡಿದರು.

ಬಳಿಕ, ಬಿಜೆಪಿ ಶಾಸಕರು, "ನೀವುಕುಡಿದಿದ್ದೀರಾ" ಎಂಬಮುಖ್ಯಮಂತ್ರಿಯಹೇಳಿಕೆಯವಿರುದ್ಧವೇ ಪ್ರತಿಭಟಿಸಿದರು.

ಸಾವುಗಳು ಶಂಕಾಸ್ಪದವಾಗಿವೆ ಎಂದು ಹೇಳಿರುವ ಪೊಲೀಸರು, ಅವುಗಳಿಗೆ ಕಾರಣವನ್ನು ಇನ್ನಷ್ಟೇ ಪತ್ತೆಹಚ್ಚಬೇಕಾಗಿದೆ ಎಂದಿದ್ದಾರೆ.

Similar News