ಪಂಜಾಬ್: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ 18 ಟೋಲ್ ಪ್ಲಾಝಾಗಳಲ್ಲಿ ರೈತರಿಂದ ಪ್ರತಿಭಟನೆ

Update: 2022-12-15 17:29 GMT

ಅಮೃತಸರ/ಹೋಸಿಯಾರ್ಪುರ, ಡಿ. 15: ಬೆಳೆ ಸಾಲ ಮನ್ನಾ, ಬೆಳೆಗಳಿಗೆ ಬೆಂಬಲ ಬೆಲೆ ಹಾಗೂ ಬೆಳೆ ಹಾನಿಗೆ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರ ಗುಂಪುಗಳು ಪಂಜಾಬ್ನ ಹಲವು ಟೋಲ್ ಪ್ಲಾಝಾಗಳಲ್ಲಿ ಗುರುವಾರ ಪ್ರತಿಭಟನೆ ನಡೆಸಿದವು.  

ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರಕಾರವನ್ನು ಒತ್ತಾಯಿಸಲು ರಾಜ್ಯದ 18 ಟೋಲ್ ಪ್ಲಾಝಾಗಳಲ್ಲಿ ಗುರುವಾರದಿಂದ ಒಂದು ತಿಂಗಳ ಕಾಲ ಪ್ರತಿಭಟನೆ ನಡೆಸುವಂತೆ ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿ (ಕೆಎಂಎಸ್ಸಿ) ಕರೆ ನೀಡಿತ್ತು. 
ಪ್ರತಿಭಟನೆ ಸಂದರ್ಭ ಟೋಲ್ ಪ್ಲಾಝಾದ ಮೂಲಕ ಸಾಗುವ ವಾಹನಗಳಿಗೆ ಶುಲ್ಕ ವಿಧಿಸುವುದಕ್ಕೆ ರೈತರು ಅವಕಾಶ ನೀಡಲಿಲ್ಲ ಎಂದು ಕೆಎಂಎಸ್ಸಿಯ ಪ್ರಧಾನ ಕಾರ್ಯದರ್ಶಿ ಶರವಣ್ ಸಿಂಗ್ ಪಂಧೇರ್ ಅವರು ಹೇಳಿದ್ದಾರೆ.  
ಪ್ರತಿಭಟನೆ ಜನವರಿ 15ರ ವರೆಗೆ ಹಗಲು-ರಾತ್ರಿ ನಡೆಯಲಿದೆ ಎಂದು ಶರವಣ್ ಸಿಂಗ್ ಪಂಧೇರ್ ಅವರು ತಿಳಿಸಿದ್ದಾರೆ.

Similar News