ಪಾಟ್ನಾ ಬಳಿ ಗಂಗಾನದಿಯಲ್ಲಿ ದೋಣಿ ಮುಳುಗಿ ಏಳು ಜನರು ನಾಪತ್ತೆ
Update: 2022-12-30 17:37 GMT
ಪಾಟ್ನಾ,ಡಿ.30: ಇಲ್ಲಿಗೆ ಸಮೀಪದ ಗಂಗಾನದಿಯಲ್ಲಿ ಶುಕ್ರವಾರ ದೊಣಿಯೊಂದು ಮುಳುಗಿದ್ದು,ಅದರಲ್ಲಿ ಪ್ರಯಾಣಿಸುತ್ತಿದ್ದ ಏಳು ಜನರು ನಾಪತ್ತೆಯಾಗಿದ್ದಾರೆ.
ಅಪರಾಹ್ನ 2:30ರ ಸುಮಾರಿಗೆ ಮಹಾವೀರ ತೋಲಾ ಘಾಟ್ ಬಳಿ ನದಿ ಮಧ್ಯೆ ಅವಘಡ ಸಂಭವಿಸಿದ್ದು,ದೋಣಿಯಲ್ಲಿದ್ದ 14 ಜನರ ಪೈಕಿ ಏಳು ಜನರು ಈಜಿ ದಡ ಸೇರಿದ್ದಾರೆ. ಉಳಿದ ಏಳು ಜನರು ನಾಪತ್ತೆಯಾಗಿದ್ದು,ರಾಜ್ಯ ವಿಪತ್ತು ಪರಿಹಾರ ಪಡೆಯು ನಡೆಸಿದ ಶೋಧ ಕಾರ್ಯಾಚರಣೆಯು ವಿಫಲಗೊಂಡಿದೆ.
ಶನಿವಾರ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ (ಎನ್ಡಿಆರ್ಎಫ್)ಯನ್ನು ಶೋಧ ಕಾರ್ಯಾಚರಣೆಯಲ್ಲಿ ತೊಡಗಿಸಲಾಗುವುದು ಎಂದು ಪಾಟ್ನಾ ಜಿಲ್ಲಾಧಿಕಾರಿ ಚಂದ್ರಶೇಖರ ಸಿಂಗ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.