ರಿಷಭ್ ಪಂತ್‌ರ ಬೆಲೆಬಾಳುವ ವಸ್ತುಗಳು ಅಪಘಾತ ನಡೆದಾಗ ಕಳವಾಗಿದೆ ಎಂಬ ವರದಿಗಳು ಸುಳ್ಳು: ಪೊಲೀಸರ ಸ್ಪಷ್ಟನೆ

Update: 2022-12-31 11:23 GMT

ಹೊಸದಿಲ್ಲಿ: ಉತ್ತರಾಖಂಡದ ರೂರ್ಕಿ ಸಮೀಪ ಕ್ರಿಕೆಟಿಗ ರಿಷಭ್ ಪಂತ್‌ (Rishabh Pant) ಅವರ ಕಾರು ಅಪಘಾತ ನಡೆದ ವೇಳೆ ಅವರಲ್ಲಿದ್ದ ನಗದು ಮತ್ತಿತರ ಬೆಲೆಬಾಳುವ ವಸ್ತುಗಳನ್ನು ದೋಚಲಾಗಿದೆ ಎಂಬ ಮಾಧ್ಯಮ ವರದಿಗಳನ್ನು ಉತ್ತರಾಖಂಡ ಪೊಲೀಸರು (Uttarakhand police) ನಿರಾಕರಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಹಿರಿಯ ಅಧಿಕಾರಿಗಳು, ಅವರ ಬೆಲೆಬಾಳುವ ವಸ್ತುಗಳು ಅಪಘಾತ ನಡೆದಾಗ ಕಳವಾಗಿದೆ ಎಂಬ ಮಾಧ್ಯಮ ವರದಿಗಳು ಸುಳ್ಳು ಮತ್ತು ಆಧಾರಹಿತ ಎಂದು ಹೇಳಿದ ಅವರು, ಪಂತ್‌ ಅವರಿಗೆ ಸೇರಿದ್ದ ಪ್ಲಾಟಿನಂ ಚೈನ್‌, ಚಿನ್ನದ ಬ್ರಾಸ್‌ಲೆಟ್‌, ರೂ 4000 ನಗದನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದಿದ್ದಾರೆ.

ಸದ್ಯ ಪಂತ್‌ ಅವರು ಡೆಹ್ರಾಡೂನ್‌ ಇಲ್ಲಿನ ಮ್ಯಾಕ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಸೋದರಿಯ ವಿವಾಹದಲ್ಲಿ ಪಾಲ್ಗೊಂಡು ಮತ್ತೆ ಜೈಲಿಗೆ ವಾಪಸಾದ ಉಮರ್‌ ಖಾಲಿದ್‌

Similar News